Don't Miss!
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಆಗ್ರಹ
ಕನ್ನಡ ಚಿತ್ರಗಳ ಗುಣಮಟ್ಟ ಹಾಗೂ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆಯೂ ಖೇದ ವ್ಯಕ್ತವಾಗಿದೆ. ಚಿತ್ರೋದ್ಯಮ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ನಿವಾರಣೋಪಾಯಗಳನ್ನು ಚರ್ಚಿಸಲಾಯಿತು. ನಿರ್ಮಾಪಕರು ಉತ್ತಮ ಕಥೆ, ಚಿತ್ರಕಥೆಗಳನ್ನು ಪ್ರೋತ್ಸಾಹಿಸುತ್ತಿಲ್ಲ ಎಂದು ದೂರಿದರು. ರೀಮೇಕ್ ಚಿತ್ರಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಚಲನಚಿತ್ರ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್ ಮಾತನಾಡುತ್ತಾ, ರೀಮೇಕ್ ಚಿತ್ರಗಳಿಗೆ ಅಂತ್ಯ ಹಾಡಬೇಕಿದೆ , ನಮ್ಮಲ್ಲಿ ಬಹಳಷ್ಟು ಉತ್ತಮ ಕಾದಂಬರಿಗಳಿವೆ, ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಹೆಚ್ಚಬೇಕು ಎಂದರು. ಚಲನಚಿತ್ರದ ಹಕ್ಕುಗಳನ್ನು ದೂರದರ್ಶನಕ್ಕೆ ಮಾರಾಟದ ಬಗ್ಗೆಯೂ ವಿರೋಧ ವ್ಯಕ್ತವಾಯಿತು. ಆದರೆ ಇದನ್ನ್ನು ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಪ್ಪಲಿಲ್ಲ.
ಕಳಪೆ ದರ್ಜೆಯ ಚಿತ್ರಮಂದಿರಗಳು, ದುಬಾರಿ ಟಿಕೆಟ್ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಚಿತ್ರಮಂದಿರಗಳು ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗೆಯೇ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಅಭಿಪ್ರಾಯ ಹೊಮ್ಮಿತು. ಫಾರ್ಮುಲಾ ಚಿತ್ರಗಳನ್ನು (ಒಂದು ಚಿತ್ರ ಹಿಟ್ ಆದರೆ ಅದರ ಹಿಂದೆಯೇ ಅದೇ ಸೂತ್ರ ಅನುಸರಿಸಿ ಪುಂಖಾನು ಪುಂಖ ಚಿತ್ರಗಳನ್ನು ನಿರ್ಮಿಸುವುದು) ಕೈಬಿಡಬೇಕು. ಇದೊಂದು ರೀತಿ ಕನ್ನಡ ಚಿತ್ರರಂಗೆಕ್ಕೆ ಶಾಪವಾಗಿ ಪರಿಣಮಿಸಿದೆ. ಚಿತ್ರಗಳಲ್ಲಿ ಹಿಂಸಾಚಾರ, ಅಶ್ಲೀಲತೆ ತಪ್ಪಬೇಕು.
ನಿರ್ದೇಶಕ ಫಣಿರಾಮಚಂದ್ರ ತಮಗೆ ಅವಕಾಶಗಳನ್ನು ಯಾವ ನಿರ್ಮಾಪಕರೂ ನೀಡುತ್ತಿಲ್ಲ ಎಂದು ದೂರಿದರು. ನಾನು ಇದುವರೆಗೂ 15 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. 5 ಚಿತ್ರಗಳು ಶತದಿನೋತ್ಸವ ಆಚರಿಸಿಕೊಂಡಿವೆ. ಆದರೂನನಗೆ ಯಾರು ಕೆಲಸ ಕೊಡುತ್ತಿಲ್ಲ ಎಂದರು. ಸಾ ರಾ ಗೋವಿಂದು ಮಧ್ಯ ಪ್ರವೇಶಿಸಿ ನೀವು ಕೊಟ್ಟ ಲೆಕ್ಕಗಳೆಲ್ಲಾ ತಪ್ಪು ಎಂದರು.ಇವರಿಬ್ಬರ ವಾದ ವಿವಾದಗಳು ಕಾವೇರುತ್ತಿರುವಂತೆಯೇ ಕೆಸಿಎನ್ ಚಂದ್ರಶೇಖರ್ ಮೈಕ್ ಕಿತ್ತುಕೊಂಡು ಸಮಾಧಾನ ಪಡಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಅಮೃತ
ಮಹೋತ್ಸವದಲ್ಲಿ
ಮಿಡಿದ
ಅಪಸ್ವರಗಳು
ಕನ್ನಡ
ಚಿತ್ರಗಳ
ಸೋಲು,
ಗೆಲುವು
ಮತ್ತು
ಸವಾಲು
ಬಿರುಸಿನ
ಚಟುವಟಿಕೆಗಳ
ತಾಣವಾದ
ಗಾಂಧಿನಗರ
ಸಾರ್ಥಕ
ಅಮೃತ
ಮಹೋತ್ಸವ:
ಗ್ಯಾಲರಿ