Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹರ್ಷಿ ಪ್ರಶಾಂತನ ಜತೆಯಲ್ಲಿ ಪೂಜಾಗಾಂಧಿ
'ಮುಂಗಾರು ಮಳೆ 'ಖ್ಯಾತಿಯ ಪೂಜಾ ಗಾಂಧಿ ಈಗ 'ಒರಟ ಐ ಲವ್ ಯು 'ಚಿತ್ರದ ನಾಯಕ ಪ್ರಶಾಂತ್ ಜತೆಗೂಡಿ ಮಹರ್ಷಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಕಾಲದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿರುವ ಕೃಷ್ಣಬ್ರಹ್ಮ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ವಿಶೇಷ.
ಮಾನಸ ಚಿತ್ರ ಲಾಂಛನದಲ್ಲಿ ಡಿ.ಕೆ.ರಾಮಕೃಷ್ಣ ಹಾಗೂ ಕೆ.ಜೆ.ಚಿದಾನಂದ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಿ.ರಾಜಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. 'ಒರಟ ಐ ಲವ್ ಯು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದಾರೆ. ಒರಟ ಇಮೇಜ್ ಬದಲಾಯಿಸಲು ಗಡ್ಡ ಮೀಸೆ ತೆಗೆದು ಮಿರಿಮಿರಿ ಮಿಂಚುತ್ತಿರುವ ಕನ್ನಡದ ಯುವನಟ ಪ್ರಶಾಂತ್ ಗೆ ಈ ಚಿತ್ರದ ಮೇಲೆ ಅಪಾರ ಭರವಸೆಯಿದೆ. ಮುನಿ, ವಿಶ್ವ . ಸ್ವಸ್ತಿಕ್ಶಂಕರ್ ಮುಂತಾದವರು ಇವರೊಂದಿಗಿದ್ದಾರೆ.
ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆರಂಭಗೊಂಡ 'ಮಹರ್ಷಿ' ಚಿತ್ರಕ್ಕೆ ಭರದ ಚಿತ್ರೀಕರಣ ನಡೆಯುತ್ತಿದೆ. ನಾಯಕ ಹಾಗೂ ನಾಯಕಿಯ ಅಭಿನಯದಲ್ಲಿ ಕೆಲವು ಪ್ರೇಮ ಸನ್ನಿವೇಶಗಳನ್ನು ಹಾಗೂ ಹೆಸರುಘಟ್ಟದಲ್ಲಿರುವ ಆಚಾರ್ಯ ಕಾಲೇಜಿನಲ್ಲಿ ಪುಂಡ ಹುಡುಗರು ಚೇಡಿಸುವ ಸನ್ನಿವೇಶವನ್ನು ನಿರ್ದೇಶಕ ಕೃಷ್ಣಬ್ರಹ್ಮ ಚಿತ್ರೀಕರಿಸಿಕೊಂಡರು.
ಕೃಷ್ಣಬ್ರಹ್ಮ ಅವರು ರಾಕೇಶ್ ಅವರೊಡಗೂಡಿ ಚಿತ್ರಕ್ಕೆ ಮಾತು ಬರೆದು ಚಿತ್ರಕಥೆ ರಚಿಸುವ ಹೊಣೆ ಹೊತ್ತಿದ್ದಾರೆ. ಉಳಿದಂತೆ ರಮೇಶ್ ಅವರಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ, ಮೋಹನ್ ಕಲೆ, ಮೋಹನ್ಮಾಳಗಿ ಸಹ ನಿರ್ದೇಶನ, ಅನಿಲ್ ಅವರ ನಿರ್ಮಾಣ ನಿರ್ವಹಣೆ 'ಮಹರ್ಷಿ'ಗಿದೆ.