twitter
    For Quick Alerts
    ALLOW NOTIFICATIONS  
    For Daily Alerts

    ಆರ್ ಅಶೋಕ್ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು

    By Rajendra
    |

    R Ashoks order not worth a fillip!
    ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿಯುವವರೆಗೆ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದು ಗೃಹ ಸಚಿವ ಆರ್ ಅಶೋಕ್ ಅಪ್ಪಣೆ ಮಾಡಿದ್ದಾರೆ.ಆದರೆ ಈ ಅಪ್ಪಣೆಗೆ ಕೆಲವು ಚಿತ್ರಮಂದಿರಗಳು ಕವಡೆ ಕಾಸಿನ ಕಿಮ್ಮತ್ತು ಕೊಡದೆ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಮಲ್ಲೇಶ್ವರದ ಮಂತ್ರಿ ಮಾಲ್ ಸೇರಿದಂತೆ ಲಿಡೋ (ಹಲಸೂರು), ಗರುಡಾ ಮಾಲ್, ವಿಷನ್ ಸಿನಿಮಾಸ್, ಶಂಕರನಾಗ್, ಪಿವಿಆರ್ (ಕೋರಮಂಗಲ) ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನ ನಿರಾತಂಕವಾಗಿ ನಡೆಯುತ್ತಿದೆ ಎಂದು 'ವಿಜಯ ಕರ್ನಾಟಕ' ಉದ್ದದ ಪಟ್ಟಿ ನೀಡಿದೆ.

    ಫೆಬ್ರವರಿ 4, 5 ಮತ್ತು 6ರಂದು ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಸೂಚಿಸಲಾಗುವುದು ಎಂದು ಸಚಿವ ಆರ್ ಅಶೋಕ್ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಗುಡುಗಿದ್ದರು. ಆದರೆ ಅವರ ಸೂಚನೆಯನ್ನು ಚಿತ್ರಮಂದಿರದ ಮಾಲೀಕರು ಗಾಳಿಗೆ ತೂರಿದ್ದಾರೆ.

    ನಾರಾಯಣ ಗೌಡ ಎಚ್ಚರಿಕೆ: ಕೆಲವು ಚಿತ್ರಮಂದಿರಗಳು ಅನ್ಯಭಾಷಾ ಚಿತ್ರಗಳನ್ನು ಪ್ರದರ್ಶಿಸುತ್ತಿವೆ. ಸಾಹಿತ್ಯ ಸಮ್ಮೇಳನ ಜಾತ್ರೆ ಮುಗಿಯುವವರೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಚಿತ್ರಮಂದಿರದ ಮಾಲೀಕರಿಗೆ ಕರವೇರಾಜ್ಯಾಧ್ಯಕ್ಷ ನಾರಾಯಣ ಗೌಡ ಎಚ್ಚರಿಸಿದ್ದಾರೆ.

    ಸಮ್ಮೇಳನದ ಆರಂಭದಿಂದಲೇ ಕೆಲವು ಚಿತ್ರಮಂದಿರಗಳಲ್ಲಿ ಅನ್ಯಭಾಷೆಯ ಚಿತ್ರಗಳು ತೆರೆಕಂಡಿದ್ದು, ತಮ್ಮ ಗಮನಕ್ಕೆ ಬಂದಿದೆ. ಮತ್ತೆ ಅನ್ಯಭಾಷೆಯ ಚಿತ್ರಗಳನ್ನು ಪ್ರದರ್ಶಿಸಿದ್ದು ನಮ್ಮ ಗಮನಕ್ಕೆ ಬಂದರೆ, ಮುಂದೆ ಆಗಬಹುದಾದ ಅನಾಹುತಕ್ಕೆ ರಕ್ಷಣಾ ವೇದಿಕೆ ಹೊಣೆಯಲ್ಲ ಎಂದಿದ್ದಾರೆ.

    English summary
    Karnataka home minister R Ashok strictly orders Bangalore theater owners to show only Kannada films till Kannada Sahitya Sammelana ends(Feb 4, 5 and 6th). But some theater owners totally neglecting the order and showing non-Kannada films, R Ashok's order not worth a fillip!
    Saturday, February 5, 2011, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X