Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜೊತೆಗಾರ'ನಿಗೆ ರು.1.50 ಲಕ್ಷ ಬಿಟ್ಟುಕೊಟ್ಟ ರಮ್ಯಾ!
'ಜೊತೆಗಾರ' ಚಿತ್ರ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ತಮಗೆ ಅಪಮಾನ ಮಾಡಿದರು ಎಂದು ಆರೋಪಿಸುವ ಮೂಲಕ ಚಿತ್ರದ ನಾಯಕ ಪ್ರೇಮ್ ಕುಮಾರ್ ಮೊನ್ನೆ ಚಿತ್ರತಂಡದಿಂದ ದೂರ ಸರಿದಿದ್ದಾರೆ. ಈಗ ನಟಿ ರಮ್ಯಾ ತಮ್ಮ ಕೊನೆ ಕಂತಿನ ಸಂಭಾವನೆ ವಿಚಾರದಲ್ಲಿ ಬಿಗಿತನವನ್ನು ಬದಿಗಿಟ್ಟಿದ್ದಾರೆ. ಒಟ್ಟಿನಲ್ಲಿ ವ್ಯತಿರಿಕ್ತ ಘಟನೆಗಳು ಜೊತೆಗಾರ ಚಿತ್ರದ ಪಾಲಾಗಿವೆ.
ರಮ್ಯಾ ಅವರಿಗೆ ನಿರ್ಮಾಪಕ ರಾಮ್ ಪ್ರಸಾದ್ ರು.1.50 ಲಕ್ಷ ಬಾಕಿ ಉಳಿಸಿಕೊಂಡಿದ್ದರು. ಕಾರಣ ಚಿತ್ರದ ನಿರ್ಮಾಣ ನಿಗದಿತ ಬಜೆಟ್ ಮೀರಿ ರು.3.5 ಕೋಟಿಗೆ ಬಂದು ನಿಂತಿತ್ತು. ಜೊತೆಗಾರ ಚಿತ್ರ ಬಿಡುಗಡೆಯಾದ ನಂತರ ಬಾಕಿ ಸಂಭಾವನೆ ಕೊಡುವುದಾಗಿ ತಿಳಿಸಿದ್ದರಂತೆ. ಆದರೆ ರಮ್ಯಾ ಹಠಮಾಡದೆ ''ನಿಮಗೆ ಯಾವಾಗ ಸಾಧ್ಯವಾಗುತ್ತದೋ ಆಗ ಕೊಟ್ಟರಾಯ್ತು ಬಿಡಿ'' ಎಂದು ರಾಮ್ ಪ್ರಸಾದ್ ಗೆ ಹೇಳಿದ್ದಾರಂತೆ. ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಬಜೆಟ್ ಸಾಲದ ಕಾರಣ ಚಿತ್ರದ ಒಂದು ಹಾಡನ್ನು ರಾಮ್ ಪ್ರಸಾದ್ ಕೈಬಿಟ್ಟಿದ್ದಾರೆ.
ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳಿಂದ 'ಜೊತೆಗಾರ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ. ಅಂದಹಾಗೆ ಈ ಚಿತ್ರದ ತಾರಾಗಣದಲ್ಲಿ ಪ್ರೇಮ್ ಕುಮಾರ್, ಆಶೀಶ್ ವಿದ್ಯಾರ್ಥಿ, ಲಕ್ಷ್ಮಿ, ರಾಜೇಂದ್ರ ಕಾರಂತ್, ಸಾಧು ಕೋಕಿಲ, ದೊಡ್ಡಣ್ಣ, ಪದ್ಮಜಾ ರಾವ್, ಸುಧಾ ಬೆಳವಡಿ, ಪ್ರತಾಪ್, ಸುನಿಲ್, ಲಯೇಂದ್ರ ಮುಂತಾದವರು ಇದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಜೊತೆಗಾರನಿಗೆ
ಲವ್ಲಿಸ್ಟಾರ್
ಪ್ರೇಮ್
ಎಳ್ಳುನೀರು
ರಮ್ಯಾ
ಜೊತೆಗಾರನಿಗೆ
ಹಾಡೊಂದು
ಬಾಕಿ
ನಂ.1
ಪಟ್ಟಕ್ಕಾಗಿ
ನಟಿ
ರಮ್ಯಾ
ಹಾರಾಟ,ಹೋರಾಟ!
ಕೋಮಲ್
ಜೊತೆಗಿನ
ಸಿನಿಮಾಕ್ಕೆ
ರಮ್ಯಾ
ನಕಾರ?
ಸುದೀಪ್,
ರಮ್ಯಾ
ಚಿತ್ರದಲ್ಲಿ
ಖಳನಟನಾಗಿ
ಕೆ.ಮಂಜು!
ಮಂಡ್ಯ
ಲೋಕಸಭೆಯಿಂದ
ನಟಿ
ರಮ್ಯಾ
ಸ್ಪರ್ಧೆ?