ಸಾರಥಿ ಹೌಸ್ ಫುಲ್: ಅಗ್ನಿಪರೀಕ್ಷೆಯಲ್ಲಿ ದರ್ಶನ್ ಪಾಸು!

ದರ್ಶನ್ ಸುತ್ತ ವಿವಾದದ ಬೇಲಿ ಇದ್ದಾಗಲೇ ಸಾರಥಿ ತೆರೆಗೆ ಬಂದಾಗ ದರ್ಶನ್ ಅಭಿಮಾನಿಗಳಲ್ಲೂ ಕಾರ್ಮೋಡ ಕವಿದಿತ್ತು. ಆದರೆ ಈಗ ಚೂರು ಚಿಂತೆಗೂ ಜಾಗವಿಲ್ಲದಂತೆ ಸಾರಥಿ ಗೆದ್ದಾಯ್ತು, ದರ್ಶನ್ ಜೈಲಿನಲ್ಲೇ ಆನಂದಬಾಷ್ಪ ಸುರಿಸಿದ್ದೂ ಆಯ್ತು.
ದರ್ಶನ್ ಎಂಬ ವ್ಯಕ್ತಿ-ಕೃತ್ಯಗಳೇ ಬೇರೆ ಬೇರೆ, ಅವರು ಅಭಿನಯಿಸಿದ ಸಿನಿಮಾವೇ ಬೇರೆ. ನಾವು ಅವರನ್ನು ಕೇವಲ ಒಬ್ಬ ನಟನಾಗಿ ನೋಡುತ್ತೇವೆ. ಅವರು ಅಭಿನಯಿಸಿರುವ ಸಿನಿಮಾಕ್ಕೂ, ಅವರ ಖಾಸಗಿ ಬದುಕಿಗೂ ನಾವು ತಾಳೆ ಹಾಕುವುದಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪ್ರೇಕ್ಷಕರು ಶರಾ ಬರೆದು ಚಿತ್ರಮಂದಿರಕ್ಕೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ.
ಹಾಗಾಗಿ ಸಾರಥಿ ನಿರ್ಮಾಪಕರು ಸೇಪ್, ದರ್ಶನ್ ಕೂಡ ಸೇಫ್ ಸೇಫ್! ನಿರ್ಮಾಣ ಹಂತದಲ್ಲಿರುವ ನಿರ್ಮಾಪಕರ ಮುಖದಲ್ಲಿ ಈಗಲೇ ಗೆಲುವಿನ ನಗೆ. ಕೇವಲ ದರ್ಶನ್ ಅಭಿಮಾನಿಗಳ ಊರುಗಳಲ್ಲಲ್ಲದೇ ಇತರೆಡೆ ಕೂಡ ಸಾರಥಿ ಹೌಸ್ ಫುಲ್. ಅಲ್ಲಿಗೆ ಜನರಿಗೆ ಖಾಸಗಿ ವಿಷಯದಲ್ಲಿ ಆಸಕ್ತಿ ಇಲ್ಲ ಎಂದಂತಾಯಿತು. ಇನ್ನು ಮುಂದಾದರೂ ನಾಲ್ಕು ಗೋಡೆಯ ಮಧ್ಯೆ ನಿರ್ಧಾರ ಆಗಬೇಕಾದ ವಿಷಯ ಬೀದಿಗೆ ಬರದಿರಲಿ...


Click it and Unblock the Notifications











