Don't Miss!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾರಥಿ ಹೌಸ್ ಫುಲ್: ಅಗ್ನಿಪರೀಕ್ಷೆಯಲ್ಲಿ ದರ್ಶನ್ ಪಾಸು!
ದರ್ಶನ್ ಸುತ್ತ ವಿವಾದದ ಬೇಲಿ ಇದ್ದಾಗಲೇ ಸಾರಥಿ ತೆರೆಗೆ ಬಂದಾಗ ದರ್ಶನ್ ಅಭಿಮಾನಿಗಳಲ್ಲೂ ಕಾರ್ಮೋಡ ಕವಿದಿತ್ತು. ಆದರೆ ಈಗ ಚೂರು ಚಿಂತೆಗೂ ಜಾಗವಿಲ್ಲದಂತೆ ಸಾರಥಿ ಗೆದ್ದಾಯ್ತು, ದರ್ಶನ್ ಜೈಲಿನಲ್ಲೇ ಆನಂದಬಾಷ್ಪ ಸುರಿಸಿದ್ದೂ ಆಯ್ತು.
ದರ್ಶನ್ ಎಂಬ ವ್ಯಕ್ತಿ-ಕೃತ್ಯಗಳೇ ಬೇರೆ ಬೇರೆ, ಅವರು ಅಭಿನಯಿಸಿದ ಸಿನಿಮಾವೇ ಬೇರೆ. ನಾವು ಅವರನ್ನು ಕೇವಲ ಒಬ್ಬ ನಟನಾಗಿ ನೋಡುತ್ತೇವೆ. ಅವರು ಅಭಿನಯಿಸಿರುವ ಸಿನಿಮಾಕ್ಕೂ, ಅವರ ಖಾಸಗಿ ಬದುಕಿಗೂ ನಾವು ತಾಳೆ ಹಾಕುವುದಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪ್ರೇಕ್ಷಕರು ಶರಾ ಬರೆದು ಚಿತ್ರಮಂದಿರಕ್ಕೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ.
ಹಾಗಾಗಿ ಸಾರಥಿ ನಿರ್ಮಾಪಕರು ಸೇಪ್, ದರ್ಶನ್ ಕೂಡ ಸೇಫ್ ಸೇಫ್! ನಿರ್ಮಾಣ ಹಂತದಲ್ಲಿರುವ ನಿರ್ಮಾಪಕರ ಮುಖದಲ್ಲಿ ಈಗಲೇ ಗೆಲುವಿನ ನಗೆ. ಕೇವಲ ದರ್ಶನ್ ಅಭಿಮಾನಿಗಳ ಊರುಗಳಲ್ಲಲ್ಲದೇ ಇತರೆಡೆ ಕೂಡ ಸಾರಥಿ ಹೌಸ್ ಫುಲ್. ಅಲ್ಲಿಗೆ ಜನರಿಗೆ ಖಾಸಗಿ ವಿಷಯದಲ್ಲಿ ಆಸಕ್ತಿ ಇಲ್ಲ ಎಂದಂತಾಯಿತು. ಇನ್ನು ಮುಂದಾದರೂ ನಾಲ್ಕು ಗೋಡೆಯ ಮಧ್ಯೆ ನಿರ್ಧಾರ ಆಗಬೇಕಾದ ವಿಷಯ ಬೀದಿಗೆ ಬರದಿರಲಿ...