twitter
    For Quick Alerts
    ALLOW NOTIFICATIONS  
    For Daily Alerts

    ರಂಗಮಂಚ ಮೇಲೆ ಬಿ ಜಯಶ್ರೀ ದಶಾವತಾರ

    By Rajendra
    |

    B Jayashree
    ಸದಾ ಬಿಜಿಯಾಗಿರುವ ತಾರೆಗೆ ರಾಜಕೀಯದಲ್ಲಿ ದೊಡ್ಡ ಹುದ್ದೆ ಸಿಕ್ಕರೆ ಕೇಳಬೇಕೆ? ದಿನದ ಇಪ್ಪತ್ತನಾಲ್ಕು ಗಂಟೆಯೂ ಬಿಜಿಯೋಬಿಜಿ. ಇದರಿಂದ ಉಮಾಶ್ರೀ, ತಾರಾ, ಶ್ರುತಿ, ಅಂಬರೀಷ್, ಜಗ್ಗೇಶ್ ಮೊದಲಾದಿ ಯಾರೊಬ್ಬರೂ ಹೊರತಾಗಿಲ್ಲ. ಎರಡನ್ನೂ ಸರಿದೂಗಿಸಿಕೊಂಡು ಹೋಗುವುದೇ ದೊಡ್ಡ ಸಾಹಸವಾಗಿಬಿಡುತ್ತದೆ!

    ಆದರೆ, ನಟಿ, ಗಾಯಕಿ ಬಿ. ಜಯಶ್ರೀ ಮಾತ್ರ ಈ ಮಾತಿಗೆ ಅಪವಾದ. ಸದ್ಯ ಕೇಂದ್ರ ಸರಕಾರದ ಎಂಎಲ್‌ಸಿ ಹುದ್ದೆ ಅಲಂಕರಿಸಿರುವ ಅವರಿಗೆ ಒಂದು ನಾಟಕ ನಿರ್ದೇಶನ ಮಾಡುವಷ್ಟು ಟೈಂ ಇದೆಯಾ?ಹೌದು, ಜಯಶ್ರೀ ಅವರು ಕೆಲವೇ ತಿಂಗಳಲ್ಲಿ ದಶಾವತಾರ ಎಂಬ ನಾಟಕವನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ.

    ಮಂಡ್ಯ ರಮೇಶ್ ಸಾರಥ್ಯದ ನಟನ ತಂಡದ ಜೊತೆ ಸೇರಿ "ದಶಾವತಾರ" ತಾಳಲಿದ್ದಾರೆ ಜಯಶ್ರೀ! ರಾಜ್ಯಸಭಾ ಸದಸ್ಯೆ ಎಂದಮೇಲೆ ಕೇಳಬೇಕೆ? ದಿನದ ಎಲ್ಲಾ ಹೊತ್ತು ಗ್ಯಾರಂಟಿ ಕೆಲಸ ಇದ್ದೇ ಇರುತ್ತದೆ. ಹೀಗಿದ್ದೂ ಜಯಶ್ರೀ ಅವರಿಗೆ ಮೈಸೂರಿಗೆ ಹೋಗಬೇಕು, ನಟನ ಜೊತೆ ಸೇರಿ ನಾಟಕ ನಿರ್ದೇಶನ ಮಾಡಬೇಕು, ಮತ್ತೆ ಗುಬ್ಬಿ ಕಂಪನಿಯ ಗತವೈಭವನನ್ನು ನೆನಪಿಸಿಕೊಡಬೇಕು ಎಂಬ ಹಂಬಲ ಮತ್ತು ತುಡಿತ ಇದೆಯಲ್ಲಾ, ಅದು ನಿಜವಾದ ರಂಗಪ್ರೀತಿ! (ಏಜೆನ್ಸೀಸ್)

    English summary
    Rajya Sabha member, actress on Kannada screen, singer B Jayasree is coming out with 'Dashavathara' play on stage in a grand style. The preparations are already on she says in the captainship of actor on stage, cinema and television Mandya Ramesh.
    Tuesday, July 5, 2011, 12:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X