Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶನ ಹೊಸ ಉಲ್ಲಾಸ ನವ ಉತ್ಸಾಹ!
ಕಳೆದ ವರ್ಷದ ಕೊನೇ ಭಾಗದಲ್ಲಿ ಬಿಡುಗಡೆಗೊಂಡು ಇಡೀ ಆಂಧ್ರದಾದ್ಯಂತ ಮಿಂಚಿನ ಸಂಚಲನವನ್ನೇ ಸೃಷ್ಟಿಸಿ ಇಡೀ ದಕ್ಷಿಣ ಭಾರತದ ಸಿನಿಮಾ ಮಂದಿಯನ್ನು ಆಕರ್ಷಿಸಿದ ತೆಲುಗಿನ ಉಲ್ಲಾಸಂಗಾ ಉತ್ಸಾಹಂಗಾ ಚಿತ್ರ ಈಗ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ತೆಲುಗಿನ ಮೂಲ ಚಿತ್ರವನ್ನು ಕೂಡ ನಮ್ಮ ಕನ್ನಡದ ಹಳೆಯ ನಿರ್ಮಾಪಕ ಸೋಮು ಅವರೇ ನಿರ್ಮಿಸಿದ್ದರು. ಅಷ್ಟೇ ಅಲ್ಲದೆ ಅವರ ಮಗ ಯಶೋ ಸಾಗರ್ ನಾಯಕನಟನಾಗಿ ಕಾಣಿಸಿಕೊಂಡಿದ್ದ. ಈ ಯಶೋ ಸಾಗರ್ ಕನ್ನಡದ ಹುಡುಗನೇ ಆಗಿದ್ದರೂ ಕನ್ನಡ ಅವತರಿಣಿಕೆಯಲ್ಲಿ ಗಣೇಶ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಓಂಪ್ರಕಾಶ್ ರಾವ್, ನಾಗಣ್ಣ ಮುಂತಾದ ನಿರ್ದೇಶಕರ ಕೈಕೆಳಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ದುಡಿದ ದೇವರಾಜ್ ಪಾಲನ್ ಈ ಚಿತ್ರವನ್ನು ನಿದೇಶಿಸುತ್ತಿದ್ದಾರೆ. ಸುಮಾರು 48 ಚಿತ್ರಗಳಿಗೆ ಅಸೋಸಿಯೇಟ್ ಆಗಿದ್ದ ದೇವರಾಜ್ ಅವರ ಅನುಭವಕ್ಕೆ ನಿರ್ಮಾಪಕ ಸೋಮು ಮತ್ತು ಅವರ ಸಹೋದರ ತ್ಯಾಗು ಮಣೆ ಹಾಕಿದ್ದಾರೆ.
ಇನ್ನು ರವಿಚಂದ್ರನ್ ಗರಡಿಯಲ್ಲಿ ಪಳಗಿಬಂದ ಸೀತಾರಾಂ ಈ ಚಿತ್ರಕ್ಕೆ ಕ್ಯಾಮೆರಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಯಾಮಿ ಗೌತಂ ಆಯ್ಕೆಯಾಗಿದ್ದಾರೆ. ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ತಂಡಕ್ಕೆ ರಿಮೇಕ್ ಚಿತ್ರವಾದರೂ ಮುಂದೆ ಉಲ್ಲಾಸ ಮೂಡಲಿ ಎಂದು ಹಾರೈಸೋಣ.
(ದಟ್ಸ್
ಕನ್ನಡಸಿನಿ
ವಾರ್ತೆ)
ಮತ್ತೊಂದು
ರಿಮೇಕ್
ಚಿತ್ರದಲ್ಲಿ
ಗೋಲ್ಡನ್
ಸ್ಟಾರ್
ಯಶಸ್ಸಿನ
ಸಾಗರದಲ್ಲಿ
ಪಲಾಯನವಾದ
ಪ್ರತಿಭೆ
ಗಣೇಶ್
ರಿಮೇಕ್
ಚಿತ್ರಕ್ಕೆ
ಆಮದು
ಬೆಡಗಿ
ಯಾಮಿ