Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೊಡ್ಡ ಮನಸ್ಸು ಮಾಡಿ ನಮ್ಮನ್ನು ಕ್ಷಮಿಸಿ - ಪಾರ್ವತಮ್ಮ
ಬೆಂಗಳೂರು : ಡಾ.ರಾಜ್ಕುಮಾರ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಂಟಾದ ಹಿಂಸಾಚಾರದಲ್ಲಿ ಮೃತರಾದವರ ಕುಟುಂಬಗಳಿಗೆ ರಾಜ್ ಕುಟುಂಬ ಪರಿಹಾರಧನ ವಿತರಿಸಿ, ಸಾಂತ್ವನ ಹೇಳಿತು.
ಪಾರ್ವತಮ್ಮ ರಾಜ್ಕುಮಾರ್ ಮೃತರ ಕುಟುಂಬದವರಿಗೆ ತಲಾ 50 ಸಾವಿರ ರೂಪಾಯಿ ಚೆಕ್ ನೀಡಿ ಭಾವುಕವಾಗಿ ಕಣ್ಣೀರು ಸುರಿಸಿದರು. ಸಮಾಧಾನ ಮಾಡಿಕೊಳ್ಳಿ, ನಾವೊಂದು ರೀತಿಯಲ್ಲಿ ಕಳೆದುಕೊಂಡಿದ್ದೇವೆ. ನೀವೊಂದು ರೀತಿಯಲ್ಲಿ ಕಳೆದುಕೊಂಡಿದ್ದೀರಿ. ಇಬ್ಬರದೂ ಹೆಚ್ಚೂಕಡಿಮೆ ಒಂದೇ ಸ್ಥಿತಿ ಎನ್ನುತ್ತಾ ಗದ್ಗದಿತರಾದರು.
ದೊಡ್ಡ ಮನಸ್ಸು ಮಾಡಿ ನಮ್ಮನ್ನು ಕ್ಷಮಿಸಿ ಎಂದು ಕೈ ಮುಗಿದು ಕಣ್ಣೀರುಗರೆದರು. ಆನಂತರ ತೀರ ಭಾವುಕವಾದ ಪಾರ್ವತಮ್ಮ ಅವರಿಗೆ ಮಾತನಾಡಲು ಆಗಲಿಲ್ಲ.
ಸರ್ಕಾರ ಘೋಷಿಸಿರುವ ಪರಿಹಾರ ಧನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತೇವೆ ಎಂದು ರಾಜ್ ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರರಾಜ್ಕುಮಾರ್ ಹಾಗೂ ಪುನೀತ್ರಾಜ್ಕುಮಾರ್ ಭರವಸೆ ನೀಡಿದರು.
ಮೃತ ಪೊಲೀಸ್ ಪೇದೆ ಮಂಜುನಾಥ್ ಮಲ್ಲಾಡಿ ಅವರ ಕುಟುಂಬ ವರ್ಗ ಹೊರತು ಪಡಿಸಿ, ಉಳಿದ ಏಳು ಕುಟುಂಬದವರು ಸದಾಶಿವನಗರದ ರಾಜ್ ನಿವಾಸಕ್ಕೆ ಆಗಮಿಸಿ ಚೆಕ್ ಪಡೆದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್