Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿಚಂದ್ರನ್ ಈಗ ಬಿಜಿಯೋ ಬಿಜಿ!
ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಖುಷಿಯಲ್ಲಿದ್ದಾರೆ ಮಾತ್ರವಲ್ಲ ಬಿಜಿಯಾಗಿದ್ದಾರೆ ಕೂಡ. ‘ಅಹಂ ಪ್ರೇಮಾಸ್ಮಿ’ ಚಿತ್ರದ ಯಶಸ್ಸು(?) ರವಿ ಅವರನ್ನು ಮತ್ತಷ್ಟು ಕ್ರಿಯಾಶೀಲರನ್ನಾಗಿಸಿದೆ.
ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ‘ಅಹಂ ಪ್ರೇಮಾಸ್ಮಿ’ ಗುಂಗಿನಿಂದ ಹೊರಬಂದಿರುವ ರವಿಚಂದ್ರನ್, ತಮ್ಮ ಇತರೆ ಕನಸುಗಳತ್ತ ಗಮನಹರಿಸಿದ್ದಾರೆ. ಇತ್ತೀಚೆಗಷ್ಟೇ ಹಾಡುಗಳ ಧ್ವನಿಮುದ್ರಣ ಮುಗಿಸಿದ ‘ಪಾಂಡು ರಂಗ ವಿಠಲ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರವಿಚಂದ್ರನ್, ಪ್ರೇಮ ಅಭಿನಯದ ಈ ಚಿತ್ರ ಜುಲೈ ಕಡೆಯವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ತೆರೆಕಾಣುವ ಸಾಧ್ಯತೆಗಳಿವೆ.
ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ‘ಆದಿಶೇಷ ’ ಚಿತ್ರದ ಬಗೆಗೆ ತಲೆಕೆಡಿಸಿಕೊಂಡಿರುವ ರವಿ, ಮತ್ತೊಂದು ಕಡೆ ನಿರ್ಮಾಪಕ ಸಂದೇಶ್ ನಾಗರಾಜ್ರ ಹೊಸ ಚಿತ್ರಕ್ಕಾಗಿ ಚಿತ್ರಕಥೆ ಬರೆಯುತ್ತಿದ್ದಾರೆ.
ಈ ಎಲ್ಲಾ ಚಿತ್ರಗಳ ಕಥೆ, ನಿರ್ದೇಶನದ ಹೊಣೆಯನ್ನು ರವಿಚಂದ್ರನ್ ಹೊತ್ತಿದ್ದಾರೆ. ‘ಅಹಂ ಪ್ರೇಮಾಸ್ಮಿ’ ಮತ್ತು ‘ಮಲ್ಲ’ ಚಿತ್ರಗಳಿಗೆ ಸಂಗೀತ ನೀಡಿ ಪಳಗಿರುವ ರವಿಚಂದ್ರನ್, ‘ಪಾಂಡುರಂಗ ವಿಠಲ’ ಮತ್ತು ‘ಆದಿಶೇಷ’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ಈ ಮಧ್ಯೆನಿರ್ಮಾಪಕ ಕೆ.ಮಂಜು ಅವರಿಗಾಗಿ ‘ಬಸವ’ ಚಿತ್ರವನ್ನು ಸಿದ್ಧ ಪಡಿಸಲು ರವಿಚಂದ್ರನ್ ಸಿದ್ಧರಾಗುತ್ತಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್