ಕತೆ ಬರೆದು ಕರೋಡ್ಪತಿಯಾಗಿ..:ಸುಭಾಷ್ ಘಾಯ್
ಮುಂಬಯಿ : ಒಳ್ಳೆ ಕತೆಯಿಲ್ಲ, ಚಿತ್ರಕತೆಯಿಲ್ಲ ಎಂಬ ಕೊರಗು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಬಾಲಿವುಡ್ನಲ್ಲೂ ಇದೆ. ಒಳ್ಳೆ ಚಿತ್ರಕತೆ ಬರೆದುಕೊಟ್ಟವರಿಗೆ 1 ಕೋಟಿ ಸಂಭಾವನೆ ನೀಡುವುದಾಗಿ ನಿರ್ಮಾಪಕ ಮತ್ತು ನಿರ್ದೇಶಕ ಸುಭಾಷ್ ಘಾಯ್ ಘೋಷಿಸಿದ್ದಾರೆ.
ಚಿತ್ರವೊಂದರ ತಯಾರಿಕೆಗಾಗಿ 20-30ಕೋಟಿಯನ್ನು ವ್ಯಯಿಸಲಾಗುತ್ತದೆ. ಹೀಗಾಗಿ ಚಿತ್ರಕತೆ ಬರೆದವರಿಗೆ 1 ಕೋಟಿ ಸಂಭಾವನೆ ನೀಡುವುದು ತಪ್ಪೇನಲ್ಲ. ಆ ಮೂಲಕ ಕ್ರಿಯಾಶೀಲರನ್ನು ಬೆಂಬಲಿಸಬಹುದು ಎಂಬುದು ಸುಭಾಷ್ ಘಾಯ್ ಅಭಿಪ್ರಾಯ.
ಕತೆಗಾರರೇ, ಇನ್ನೇಕೆ ತಡ ಪೆನ್ನು ಪೇಪರ್ ಕೈಗೆತ್ತಿಕೊಳ್ಳಿ.. ಕ್ರಿಯಾಶೀಲತೆಯನ್ನು ಪ್ರದರ್ಶಿಸಿ.. ಕರೋಡ್ ಪತಿಯಾಗಿ!
(ಏಜನ್ಸೀಸ್)


Click it and Unblock the Notifications