ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ರಮ್ಯಾಗೆಲ್ಲಿದೆ ಪುರಸೊತ್ತು?
ರಮ್ಯಾಆತ್ಮಹತ್ಯೆಗೆ ಪ್ರಯತ್ನಿಸಿದರು ಎಂಬ ಸುದ್ದಿ ವಾರವಿಡೀ ಸ್ಯಾಂಡಲ್ವುಡ್ನಲ್ಲಿ ಸುತ್ತಾಡಿ, ಈಗ ಅದೆಲ್ಲವೂ ಸುಳ್ಳೆಂದು ಖಚಿತವಾಗಿದೆ. ನಿಜ ಹೇಳಬೇಕು ಅಂದ್ರೆ; ರಮ್ಯಾಗೆ ಸಾಯುವುದಕ್ಕೂ ಕೂಡ ಪುರಸೊತ್ತಿಲ್ಲ! ಆಷ್ಟೊಂದು ಚಿತ್ರಗಳು ರಮ್ಯಾ ಮುಂದಿವೆ.
ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ನಟರ ಜೊತೆ ನಟಿಸಲು ಅವರಿಗೆ ಆಹ್ವಾನಗಳು ಬರುತ್ತಿವೆ. ತೆಲುಗಿನ ‘ ಅಮೃತವರ್ಷಂ’ ಚಿತ್ರ ಕ್ಲಿಕ್ ಆಗಿದೆ. ಈ ಮಧ್ಯೆ ತಮಿಳಿನಲ್ಲೂ ಆಫರ್ಗಳು ಬರುತ್ತಿವೆ.
ಪ್ರಸ್ತುತ ತಮಿಳು ಚಿತ್ರವೊಂದರ ಚಿತ್ರೀಕರಣದ ಹಿನ್ನೆಲೆ ಲಂಡನ್ನಲ್ಲಿದ್ದಾರೆ. ಇನ್ನೂ ಎರಡೂ ತಿಂಗಳ ಕಾಲ ಅವರು ಅಲ್ಲಿಯೇ ಇರುತ್ತಾರೆ. ‘ತನನಂ ತನನಂ’ ಚಿತ್ರದ ಶ್ಯಾಮ್, ಈ ತಮಿಳು ಚಿತ್ರದ ನಾಯಕ.
ಈ ಹಿಂದೆ ತಮಿಳಿನಲ್ಲಿ ‘ಕುಟ್ಟು’ ಮತ್ತು ‘ಗಿರಿ‘ ಚಿತ್ರಗಳಲ್ಲಿ ರಮ್ಯಾ ನಡಿಸಿದ್ದರು. ಕಾಲಿವುಡ್ ಪ್ರೇಕ್ಷಕರಿಗೆ ರಮ್ಯಾ ಅಂದ್ರೆ ಸಕತ್ತು ಇಷ್ಟವಂತೆ. ಹೀಗಾಗಿಯೇ ತಮಿಳಿನತ್ತ ರಮ್ಯಾ ಹೆಜ್ಜೆ ಹಾಕುತ್ತಿದ್ದಾರೆ!
Post your views


Click it and Unblock the Notifications