Don't Miss!
- News Lok Sabha Election: ಗೂಗಲ್ನಲ್ಲೂ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮ
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ ‘ನಗೆ’ ನೆನೆಗುದಿಗೆ ಬಿತ್ತು
ಎನ್.ಕೆ. ಪ್ರಕಾಶ್ಬಾಬು ಕೈ ಎತ್ತಿದ್ದಾರೆ. ಅವರ ಹತ್ತಿರ ಕಾಸಿಲ್ಲವಂತೆ. ಹೀಗಾಗಿ ಶಿವರಾಜ್ ಕುಮಾರ್ 'ನಗೆ" ಅರ್ಥಾತ್ 'ಸ್ಮೈಲ್" ಚಿತ್ರೀಕರಣ ಸ್ಥಗಿತಗೊಂಡಿದೆ. ಶಿವರಾಜ್ಗೇನೋ ಬೇರೆ ಕೆಲಸಗಳಿವೆ. ಆದರೆ, ಇದರಿಂದ ಕಂಗಾಲಾಗಿ ಕೂತಿರುವವರು ಸೀತಾರಾಮ ಕಾರಂತ.
'ಚಂದ್ರಮುಖಿ ಪ್ರಾಣಸಖಿ"ಯಂಥಾ ಹಿಟ್ ಹಾಗೂ 'ಶ್ರೀರಸ್ತು ಶುಭಮಸ್ತು"ವಿನಂಥಾ ಫ್ಲಾಪ್ ಚಿತ್ರ ಕೊಟ್ಟಿರುವ ಸೀತಾರಾಮ ಕಾರಂತರ ಪ್ರತಿಭೆ ಬಗ್ಗೆ ಅನುಮಾನ ಬೇಡ. ತಮ್ಮ ನಾಯಕತ್ವದ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳ ಸಾಲು ಸೋಲಿನಿಂದ ಹೊರಬರುವ ಶಿವರಾಜ್ ಕುಮಾರ್ ಯತ್ನಕ್ಕೆ 'ಸ್ಮೈಲ್" ಆಶಾಕಿರಣವಾಗಿತ್ತು. ಆದರೆ ಯಾಕೋ ಶಿವರಾಜ್ ನಸೀಬೇ ಸರಿಯಿಲ್ಲ. ಒಂದೆಡೆ 'ಜಿಲ್ಲಾಧಿಕಾರಿ" ನೆನೆಗುದಿಗೆ ಬಿತ್ತು. ಈಗ 'ಸ್ಮೈಲ್"ಗೂ ಅದೇ ಸ್ಥಿತಿ. ಪ್ರಕಾಶ್ ಬಾಬೂನ ನೆಚ್ಚಿಕೊಂಡಿದ್ದ ಕಾರಂತರಂತೂ ಅಕ್ಷರಶಃ ಕಂಗಾಲಾಗಿದ್ದಾರೆ.
ಮುಂಬಯಿ ಬೆಡಗಿ ನೇಹಾ ಈ ಚಿತ್ರದ ನಾಯಕಿ. ಹೀಗಾಗಿ ಮುಂದೆ ಆಕೆಯ ಡೇಟ್ಸ್ನ ತೊಂದರೆಗಳು ಇದಿರಾಗುವ ಅಪಾಯವಿದೆ. ಇವೆಲ್ಲಾ ಚಿಂತೆಯಲ್ಲಿ ಕಾರಂತರು ಮುಳುಗಿದ್ದರೆ, ಅತ್ತ ತಮ್ಮ ಚೊಚ್ಚಿಲ ನಾಯಕತ್ವದ ಚಿತ್ರಕ್ಕಾಗಿ ಶಿವಮಣಿ ಮೈತುಂಬಾ ಸಾಲ ಮಾಡಿಕೊಂಡಿರುವ ಸುದ್ದಿ ಬಂದಿದೆ. ಶಿವಮಣಿಗೆ ಕೈ ಎತ್ತಿದ ನಿರ್ಮಾಪಕನ ಹೆಸರು ಸಂಪತ್ ಕುಮಾರ್. 'ಲವ್ ಯೂ" ಸಿನಿಮಾಗೆ ಕಾಸು ಹಾಕಿದ್ದೇ ತಡ ಆತನ ಸಂಪತ್ತು ಢಮಾರ್!