Don't Miss!
- Finance Zero Shadow Day: ಬೆಂಗಳೂರಿನಲ್ಲಿ ಇಂದು ಪ್ರಕೃತಿಯ ಅಚ್ಚರಿ
- News ರಾಜ್ಯದ ವಿವಿಧೆಡೆ ವರುಣದೇವನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ?
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜರಾಸಂಧ ಈ ವಾರ ಬರ್ತಿಲ್ಲ ಏಕೆ, ಓವರ್ ಟು ಶಶಾಂಕ್
ಚಿತ್ರಮಂದಿರ ಸಿಗಲಿಲ್ಲ ಎಂದು ಸಿನಿಮಾ ರಿಲೀಸ್ ಮುಂದಕ್ಕೆ ಹಾಕುವುದನ್ನು ನೋಡಿರುತ್ತೀರಿ. ಆದರೆ, ಚಿತ್ರಕ್ಕೆ ಪ್ರಚಾರ ಕಮ್ಮಿಯಾಯ್ತು ಇನ್ನೊಂದು ವಾರ ಬಿಟ್ಟು ರಿಲೀಸ್ ಮಾಡೋಣ ಅಂದವರನ್ನು ನೋಡಿರೋದು ಕಮ್ಮಿ.
ಯಶಸ್ವಿ ನಿರ್ದೇಶಕ ಶಶಾಂಕ್ ಅವರು ತಮ್ಮ ಬಹು ನಿರೀಕ್ಷೆಯ ಚಿತ್ರ 'ಜರಾಸಂಧ' ಮತ್ತೊಂದು ವಾರಕ್ಕೆ ಮುಂದೂಡಿದ್ದಾರೆ. ನ.11ರ ಬದಲಾಗಿ ನ.18ರಂದು ಜರಾಸಂಧ ತೆರೆಗೆ ಅಪ್ಪಳಿಸಲಿದ್ದಾನೆ.
ಫಿಲ್ಮಂ ರಿಲೀಸ್ ಯಾಕೆ ಲೇಟ್ ಎಂದರೆ ಮೊದಲಿಗೆ ಸೆನ್ಸಾರ್ ಸಟಿಫಿಕೇಟ್ ಸಿಕ್ಕಿಲ್ಲ, ಕೆಲ ತಾಂತ್ರಿಕ ತೊಂದರೆಗಳಿವೆ ಸರಿಪಡಿಸಬೇಕು ಎಂದು ಶಶಾಂಕ್ ಹೇಳಿದ್ದರು.
ಬಹುಶಃ ಸೋಮವಾರ ಮೊದಲ ಪ್ರಿಂಟ್ ಕೈಸೇರಲಿದೆ. ಆಮೇಲೆ ನಾಯಕ ದುನಿಯಾ ವಿಜಯ್, ಪ್ರಣೀತಾ ಸೇರಿದಂತೆ ಚಿತ್ರತಂಡಕ್ಕೆ ವಿಶೇಷ ಪ್ರದರ್ಶನ ಏರ್ಪಡಿಸಲಾಗುವುದು ಎಂಖದು ಶಶಾಂಕ್ ತಿಳಿಸಿದರು.
ಇದಕ್ಕೂ ಮುಖ್ಯ ಕಾರಣ ಎಂದರೆ, ಚಿತ್ರಕ್ಕೆ ಸರಿಯಾದ ಪ್ರಚಾರ ಇನ್ನೂ ಸಿಕ್ಕಿಲ್ಲ, ಅಫ್ ಕೋರ್ಸ್ ಚಿತ್ರದ ಹಾಡುಗಳು ನಿಧಾನವಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಆದರೆ, ಚಿತ್ರಕ್ಕೆ ಸರಿಯಾಗಿ ಪ್ರಚಾರ ನೀಡಲು ಇನ್ನೂ ಒಂದು ವಾರವಾದರೂ ಬೇಕು ಎಂದು ಶಶಾಂಕ್ ಅಭಿಪ್ರಾಯಪಟ್ಟಿದ್ದಾರೆ.
ರೋಚಕ ಸಾಹಸ ದೃಶ್ಯಗಳನ್ನು ಹೊಂದಿರುವ ಜರಾಸಂಧದಲ್ಲಿ ದುನಿಯಾ ವಿಜಯ್ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸವನ್ನು ಶಶಾಂಕ್ ವ್ಯಕ್ತಪಡಿಸಿದರು. ಜರಾಸಂಧ ಹತ್ತರಲ್ಲಿ ಇನ್ನೊಂದು ಚಿತ್ರವಾಗದೆ ಬ್ಲ್ಯಾಕ್ ಕೋಬ್ರಾ ವಿಜಯ್ ಗೆ ಹೊಸ ದಾರಿ ತೋರಿಸಲಿದೆ ಎಂದು ಅಭಿಮಾನಿಗಳೂ ನಂಬಿದ್ದಾರೆ.