Don't Miss!
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಾಡುಗಳ ಹರಿಕಾರ ಗೀತಪ್ರಿಯ ಹಿನ್ನೋಟ
ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುವ ವಿಭಿನ್ನ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ' ಯಲ್ಲಿ ಗೀತಪ್ರಿಯ ಅವರನ್ನು ಭೇಟಿಯಾಗಬಹುದು. ಏಪ್ರಿಲ್ 10ರಂದು ಸಂಜೆ 4.30ಕ್ಕೆ ಬಾದಾಮಿ ಹೌಸ್ ನಲ್ಲಿ ಗೀತಪ್ರಿಯ ಜೊತೆ ಹಿನ್ನೋಟಕ್ಕೆ ಹೊರಳಬಹುದು.
ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ, ನಮ್ಮೂರ್ನಾಗ್ ನಾನೊಬ್ಬನೆ ಜಾಣ, ಇದೇನ ಸಭ್ಯತೆ,ಇದೇನ ಸಂಸ್ಕೃತಿ, ಹಕ್ಕಿಯು ಹಾರುತಿದೆ, ವೀಣಾ ನಿನಗೇಕೋ ಈ ಕಂಪನ...ಹಾಡುಗಳನ್ನು ಕೇಳಿದಾಗಲೆಲ್ಲಾ ಅವರು ಕೇವಲ ಗೀತಪ್ರಿಯರಷ್ಟೆ ಅಲ್ಲ ಸಂಗೀತ ಪ್ರಿಯರು ಎಂಬುದು ಮನದಟ್ಟಾಗುತ್ತದೆ. ಒಂದೇ ಬಳ್ಳಿಯ ಹೂಗಳು, ಬೆಟ್ಟದ ಹುಲಿ, ಹೊಂಬಿಸಿಲು ಸೇರಿದಂತೆ ಮುವ್ವತ್ತು ಅರ್ಥಪೂರ್ಣ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕರು ಗೀತಪ್ರಿಯ.
ಗೀತಪ್ರಿಯ ನಿರ್ದೇಶನದ 'ಮಣ್ಣಿನ ಮಗ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಗೀತಪ್ರಿಯ ನಲವತ್ತೈದು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಬೆಳುವಲದ ಮಡಿಲಲ್ಲಿ, ಪುಟಾಣಿ ಏಜೆಂಟ್ 123, ಪ್ರೀತಿಸಿ ನೋಡು, ಬೆಸುಗೆ, ಹೊಂಬಿಸಿಲು ಚಿತ್ರಗಳು ಗೀತಪ್ರಿಯ ಅವರ ಪ್ರೌಢ ನಿರ್ದೇಶನಕ್ಕೆ ಕನ್ನಡಿ ಹಿಡಿಯುತ್ತವೆ.