twitter
    For Quick Alerts
    ALLOW NOTIFICATIONS  
    For Daily Alerts

    ಜಗ್ಗೇಶ್ ಮಾನವೀಯತೆ ಎಲ್ಲರಿಗೂ ಮಾದರಿಯಾಗಲಿ

    |

    Jaggesh
    ಕನ್ನಡ ಚಿತ್ರರಂಗದಲ್ಲಿ ಕಷ್ಟ ಪಟ್ಟು ಮೇಲೆ ಬಂದವರಲ್ಲಿ ನವರಸನಾಯಕ ಜಗ್ಗೇಶ್ ಕೂಡ ಒಬ್ಬರು. ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುವವರು ಹೇಗೆ ಕಷ್ಟ ಪಡುತ್ತಾರೆನ್ನುವುದು ಜಗ್ಗೇಶ್ ಅವರಿಗೆ ಚೆನ್ನಾಗಿಯೇ ಗೊತ್ತು. ಜಗ್ಗೇಶ್ ಒಮ್ಮೆ ತಮ್ಮ ಚಿತ್ರದಲ್ಲಿ ಹೊಸಬರಿಗೆ ಅವಕಾಶ ನೀಡಿದರೆ ಅದೇ ತಂಡವನ್ನು ಮುಂದಿನ ಚಿತ್ರಗಳವರೆಗೆ ಮುಂದುವರಿಸಿಕೊಂಡು ಹೋಗುತ್ತಾರೆ.

    ಇದಕ್ಕೆ ಜಗ್ಗೇಶ್ ನೀಡುವ ವಿವರಣೆ ತೀರ ಸರಳವಾದದ್ದು. ಒಮ್ಮೆ ಅವಕಾಶ ನೀಡಿ ಕೈ ಬಿಟ್ಟರೆ ಅವರು ಪುನಃ ಅವಕಾಶಕ್ಕಾಗಿ ಪರದಾಡಬೇಕು. ಅದಕ್ಕಿಂತ ತಮ್ಮದೇ ಮುಂದಿನ ಚಿತ್ರಗಳಲ್ಲಿ ಅವಕಾಶ ನೀಡಿ ಅವರಲ್ಲಿರುವ ಎಲ್ಲಾ ಪ್ರತಿಭೆಯನ್ನು ಹೊರತೆಗೆಯಬಹುದು. ನಂತರ ಒಂದು ಹಂತಕ್ಕೆ ಹೊಸಬರು ಬೆಳೆದ ಮೇಲೆ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎನ್ನುವುದು ಜಗ್ಗೇಶ್ ಅವರ ಒಳ್ಳೆಯ ಗುಣ.

    ನಾವು ಪಟ್ಟ ಕಷ್ಟವನ್ನು ಬೇರೆಯವರು ಪಡಬಾರದು ಎಂಬುದು ಇದರಲ್ಲಿ ಅಡಗಿರುವ ಚಿಕ್ಕ ಮಾನವೀಯತೆ ಎನ್ನುತ್ತಾರೆ ಜಗ್ಗೇಶ್. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಕಾಲೆಳೆಯುವ ಇಂತಹ ಕಾಲದಲ್ಲಿ ಜಗ್ಗೇಶ್ ರಂತಹ ಹಿರಿಯ ನಟರ ಮಾನವೀಯತೆ ಉಳಿದವರಿಗೂ ಮಾದರಿಯಾಗಲಿ.

    English summary
    Senior actor of Kannada industry Jaggesg prefer to give more opportunity to new comers. So that we can take out best of their talents.
    Tuesday, December 6, 2011, 9:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X