Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯ್ಕೆ ಸಮಿತಿಯಲ್ಲಿ ಭಾರತಿ ವಿಷ್ಣುವರ್ಧನ್ ಇದ್ದಿದ್ದಕ್ಕೆ ಬಚಾವ್
ಕೆಲವೇ ಲಕ್ಷ ರೂಪಾಯಿಗಳಲ್ಲಿ ಸಿನಿಮಾ ಮಾಡಿ ಮುಗಿಸಿ ಅದಕ್ಕೆ ಕಲಾತ್ಮಕ ಸಿನಿಮಾ ಎಂದು ಸ್ಥಾನ ಗಿಟ್ಟಿಸಿ ಅದಕ್ಕೊಂದು ಪ್ರಶಸ್ತಿಯನ್ನು ಗಳಿಸಿ ಕಾಲರ್ ಎಗರಿಸುವ ನಿರ್ಮಾಪಕರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಆ ಚಿತ್ರವನ್ನು ಅವರ ಕುಟುಂಬದವರು ಬಿಟ್ಟರೆ ಮತ್ತಿನ್ಯಾರೂ ನೋಡುವುದಿಲ್ಲ ಎಂದು ನಿರ್ಮಾಪಕ ಸೂರಪ್ಪ ಬಾಬು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ನಿರ್ಮಾಣದ ಪೃಥ್ವಿ ಚಿತ್ರದ ನಟನೆಗೆ ಪುನೀತ್ ರಾಜಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ ಅದು ಸಂತೋಷ ತಂದಿದೆ. ಆದರೆ ಪ್ರಶಸ್ತಿ ಆಯ್ಕೆ, ಮಾನದಂಡದ ಬಗ್ಗೆ ನನಗೆ ಬಹಳಷ್ಟು ಅಸಮಾಧಾನಗಳಿವೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅದನ್ನು ಜನರಿಗೆ ತಲುಪಿಸಬೇಕೆಂದು ಮತ್ತಷ್ಟು ಲಕ್ಷ ಆದರೆ ಮೇಲೆ ಸುರಿದು ವರ್ಷಪೂರ್ತಿ ಒದ್ದಾಡುವ ನಿರ್ಮಾಪಕರು ನಾವು ಎಂದು ಸೂರಪ್ಪ ಬಾಬು ಬೇಸರ ವ್ಯಕ್ತ ಪಡಿಸಿದ್ದಾರೆ.
ಚಿತ್ರವೊಂದನ್ನು ಜನರಿಗೆ ತೋರಿಸದೆ ಅದು ಸಾಮಾಜಿಕ ಪರಿಣಾಮ ಬೀರುವುದು ಹೇಗೆ? ಸಾಕಷ್ಟು ಜನ ನೋಡಿ ಮೆಚ್ಚಿರುವ ಕಾರಣಕ್ಕೆ ಚಿತ್ರಗಳು ಜನಪ್ರಿಯ ಅನಿಸಿಕೊಂಡಿರುತ್ತದೆ. ಅಂಥವುಗಳಲ್ಲಿ ಸಂದೇಶವಿದ್ದರೆ ಒಂದಷ್ಟು ಜನ ಸೀರಿಯಸ್ಸಾಗಿ ಸ್ವೀಕರಿಸುವ ಸಾಧ್ಯತೆಗಳೂ ಇರುತ್ತವೆ. ಆದರೆ ಅವುಗಳನ್ನು ಕಮರ್ಷಿಯಲ್ ಚಿತ್ರವೆಂದು ಹಣೆಪಟ್ಟಿ ಕಟ್ಟಿ ಪ್ರಶಸ್ತಿಯಿಂದ ವಂಚಿಸಲಾಗುತ್ತದೆ ಎಂದು ಬಾಬು ಗರಂ ಆಗಿದ್ದಾರೆ.