Don't Miss!
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆದರಿಕೆ ಸಾರ್ ಬೆದರಿಕೆ... ಮದನ್ ಸಿಡಿಸಿದ ಬಾಂಬ್!
ಇದನ್ನು ಪಬ್ಲಿಸಿಟಿ ಗಿಮಿಕ್ ಅನ್ನಬೇಕೋ ಅಥವಾ ಸತ್ಯ ಸುದ್ದಿ ಎಂದು ಪರಿಗಣಿಸಬೇಕೋ ಗೊತ್ತಾಗುತ್ತಿಲ್ಲ! ನಟ, ನಿರ್ಮಾಪಕ, ನಿರ್ದೇಶಕ ಮದನ್ ಪಟೇಲ್ ಇದೇ ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮತ್ತೊಮ್ಮೆ ಮಾನವ ಬಾಂಬ್ ಸಿಡಿಸಿದ್ದಾರೆ!
ಅದೇನಪ್ಪ ಅಂದರೆ, ಅವರು ಅದೇ ಪಾರ್ಕ್ನಲ್ಲಿ ಮುಹೂರ್ತ ಮಾಡುತ್ತಿರುವ ಸ್ವಾಮಿ ನಿತ್ಯಾನಂದ "ಲೀಲೆ" ಸಂಗ್ರಹಿತ ಸತ್ಯಾನಂದ ಚಿತ್ರವನ್ನು ನಿಲ್ಲಿಸುವಂತೆ ಸ್ವತಃ ನಿತ್ಯಾನಂದ ಕಡೆಯವರಿಂದ ದೂರವಾಣಿ ಕರೆ ಬಂದಿದೆ! ಈ ಕರೆ ತಿಂಗಳ ಹಿಂದೆಯೇ ಮದನ್ ಎಂಡ್ ಟೀಮ್ ಸಿನಿಮಾ ಮಾಡಲು ಪ್ಲ್ಯಾನ್ ಮಾಡುವ ಹೊತ್ತಿಗಾಗಲೇ ಬಂದಿತ್ತಂತೆ. ಅದನ್ನು ಅವರು ಈ ಸುಮುಹೂರ್ತ ಸಂದರ್ಭದಲ್ಲಿ ಬ್ಲ್ಯಾಸ್ಟ್ ಮಾಡಿದ್ದಾರೆ!
ಅಂದಹಾಗೇ ಮದನ್ ಪಟೇಲ್ ವರ್ಷ-ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ. ವರ್ಷದ ಹಿಂದೆ ಗಾರ್ಮೆಂಟ್ ಫ್ಯಾಕ್ಟರಿ ಹುಡುಗಿಯರು "ಅನುಭವಿಸುವ ಕಿರುಕುಳ, ತಳಮಳ, ಉಪಟಳ ಇತ್ಯಾದಿಗಳ ಬಗ್ಗೆ ಒಂದು ಡಾಕ್ಯೂಮೆಂಟರಿ ಥರದ "ಹೀಗೂ ಉಂಠೇ!!!" ಸಿನಿಮಾ ಮಾಡಿದ್ದರು. ಅದು ಯಶಸ್ವೀ ಒಂದು ಪ್ರದರ್ಶನ ಕಂಡಿತ್ತು!
ಈಗ ನಿತ್ಯಾನಂದರ ಸತ್ಯಾನಂದ ಕತೆ ಮಾಡಲು ಹೊರಟಿದ್ದಾರೆ. ಸಿನಿಮಾ ರೆಡಿಯಾಗುವ ಮುನ್ನವೇ ಬಾಂಬು ಸಿಡಿಸಿ ಸುದ್ದಿಯಾಗಿದ್ದಾರೆ. ಇದಕ್ಕೆ ನಿತ್ಯಾನಂದ ಎಂಡ್ ಪಾರ್ಟಿ ಏನೆನ್ನುತ್ತದೆ ಎನ್ನುವುದರ ಮೇಲೆ ಸತ್ಯಾನಂದನ ಸತ್ಯಾಸತ್ಯತೆ ಗೊತ್ತಾಗಲಿದೆ!