Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುಭಾಷಾ ವಿಹಾರಿ ಸವಾರಿ ಈ ವಾರ ತೆರೆಗೆ
ತೆಲುಗಿನಲ್ಲಿ ಜನಪ್ರಿಯವಾದ ಚಿತ್ರ 'ಗಮ್ಯಂ'. ಈ ಚಿತ್ರ ಕನ್ನಡದಲ್ಲಿ 'ಸವಾರಿ ಹೆಸರಿನಿಂದ ನಿರ್ಮಾಣವಾಗಿದ್ದು ನೋಡುಗರನ್ನು ರಂಜಿಸಲಿದೆ. ಈ ಸವಾರಿ ಬಹುಬಾಷಾ ವಿಹಾರಿ ಕೂಡ. ತೆಲುಗು, ಕನ್ನಡವಷ್ಟೇ ಅಲ್ಲದ್ದೇ ದೇಶದ ಇತರ ಭಾಷೆಗಳಲ್ಲೂ ಈ ಚಿತ್ರ ನಿರ್ಮಾಣವಾಗುತ್ತಿದೆ.
ವನದೇವತೆಯ ತವರಿನಂತಿರುವ ಸಕಲೇಶಪುರ, ಕುದುರೆ ಮುಖ ಹಾಗೂ ಆಸ್ತಿಕರ ಸ್ವರ್ಗವಾಗಿರುವ ಕುಕ್ಕೆ ಸುಬ್ರಹ್ಮಣ್ಯ, ಯಡಿಯೂರು ಸೇರಿದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸವಾರಿಯ ಚಿತ್ರೀಕರಣ ನಡೆದಿದೆ. ಮಣಿಕಾಂತ್ ಕದ್ರಿ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಜನಪ್ರಿಯವಾಗಿದೆ. ಕಳೆದ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದ ಕಿರುಚಿತ್ರ ಮಲಯಾಳಂನ 'ಆದಿಯಂ. ಈ ಕಿರುಚಿತ್ರದ ನಿರ್ದೇಶಕರಾದ ಜೇಕಬ್ ವರ್ಗೀಸ್ 'ಸವಾರಿಯನ್ನು ನಿರ್ದೇಶಿಸಿದ್ದಾರೆ.
ನಾಗೇಂದ್ರಪ್ರಸಾದ್, ಕವಿರಾಜ್ ಬರೆದ ಐದುಗೀತೆಗಳಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ವೇಲ್ ರಾಜ್ ಛಾಯಾಗ್ರಹಣ, ಎ.ಶ್ರೀಕರ್ ಪ್ರಸಾದ್ ಸಂಕಲನ, ಸುನೀಲ್ ರಾಜ್, ಹೇಮಂತ್ ಸಹ ನಿರ್ದೇಶನ, ಅನಿಲ್ ನಿರ್ಮಾಣ ನಿರ್ವಹಣೆ, ಬಾಬಿ, ರೇಖಾ, ರಘು ನೃತ್ಯ, ಕೌರವ ವೆಂಕಟೇಶ್, ಡಿಫ಼ರೆಂಟ್ ಡ್ಯಾನಿ, ಗಣೇಶ್ ಸಾಹಸವಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ರಘು ಮುಖರ್ಜಿ, ಕಮಲಿನಿ ಮುಖರ್ಜಿ, ಸಾಧು ಕೋಕಿಲಾ, ಪವಿತ್ರಾಲೋಕೇಶ್, ಸಿ.ಆರ್.ಸಿಂಹ, ಮಿಲೀನ್ ಗುನಾಂಜಿ, ಸುಮನ್ರಂಗನಾಥ್, ದತ್ತಣ್ಣ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ. ಈ ಚಿತ್ರಕ್ಕೆ ಉಷಾಕಿರಣ್ ಮೂವೀಸ್ನೊಂದಿಗೆ ಅರ್ಕಾ ಮೀಡಿಯಾ ಸಂಸ್ಥೆಯ ಸಹ ನಿರ್ಮಾಣವಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ರಾಮೋಜಿ
ರಾವ್
ಚಿತ್ರದಲ್ಲಿ
ಶ್ರೀನಗರ
ಕಿಟ್ಟಿ
ಪ್ರೇಮದ
ಪಯಣ
ಹೊರಡಲು
ಸವಾರಿ
ಸಿದ್ಧ