Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ಗಾಂಧಿನಗರ ಬೆಚ್ಚಿ ಬೀಳಿಸುವ ಬ್ರೇಕಿಂಗ್ ನ್ಯೂಸ್
2010 ರಲ್ಲಿ ಸಿಂಬಲ್ ಚಿಹ್ನೆಯ ಮೂಲಕ ಸೂಪರ್ ಆಗಿ ಗಿರಿಗಿಟ್ಲೆ ಆಡಿಸಿದ್ದ ಉಪೇಂದ್ರ ತನ್ನಲ್ಲಿರುವ ನಿರ್ದೇಶನದ ಜಾಣ್ಮೆಯನ್ನು ಮತ್ತೊಮ್ಮೆ ಒರೆಗೆ ಹಚ್ಚಲಿದ್ದಾರೆ. ಚಿತ್ರವನ್ನು ರಾಕಲೈನ್ ವೆಂಕಟೇಶ್ ನಿರ್ಮಿಸಲಿದ್ದಾರೆ. ಉಳಿದ ತಂತ್ರಜ್ಞಾನ, ತಾರಾಗಣ ಇನ್ನೂ ಅಂತಿಮವಾಗಿಲ್ಲ.
ಉಪೇಂದ್ರ ಅಭಿನಯದ ಆರಕ್ಷಕ ಚಿತ್ರ ಈ ತಿಂಗಳು ತೆರೆಗೆ ಬರಲಿದೆ. ಗಾಡ್ ಫಾದರ್ ಚಿತ್ರ ಚಿತ್ರೀಕರಣದ ಹಂತದಲ್ಲಿದ್ದು, ಕಲ್ಪನಾ ಚಿತ್ರಕ್ಕೆ ಇದೇ ತಿಂಗಳು ಸಂಕ್ರಾಂತಿಯಂದು ಮಹೂರ್ತ ಫಿಕ್ಸ್ ಆಗಿದೆ. 3ಡಿ ಚಿತ್ರ ಕಠಾರಿ ವೀರ ಸುರಸುಂದರಾಂಗಿ ಇದ್ದಿಷ್ಟು ಸದ್ಯ ಉಪೇಂದ್ರ ಬಳಿ ಇರುವ ಪ್ರಾಜೆಕ್ಟ್ ಗಳು.
2010ರಲ್ಲಿ ಅವರು ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದ ಸೂಪರ್ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಭರ್ಜರಿ ಹಿಟ್ ಆಗಿತ್ತು. ಆ ಚಿತ್ರಕ್ಕೆ ಕೂಡಾ ರಾಕಲೈನ್ ವೆಂಕಟೇಶ್ ಅವರೇ ನಿರ್ಮಾಪಕರಾಗಿದ್ದರು. ಈಗ ಇನ್ನೊಂದು ಮೆಗಾ ಬಜೆಟ್ ಚಿತ್ರಕ್ಕೆ ಅವರು ಕೈಹಾಕಿದ್ದಾರೆ. ಬಾಕ್ಸ್ ಆಫೀಸ್ ಕಿಂಗ್ ಪುನೀತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಾಗಿ ನಟಿಸುವುದು ಒಂದು ಕಡೆಯಾದರೆ ಆ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಮಾಡುವುದು ಪ್ರೇಕ್ಷಕರ ಪಾಲಿಗೆ ಹಬ್ಬವೋ ಹಬ್ಬ.