Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾವೇರಿ ಹೋರಾಟಕ್ಕೆ ಅಂಬಿ, ವಿಷ್ಣು ಮತ್ತಿತರರ ರಣಕಹಳೆ
ಯಾರ್ಯಾರು
ಏನನ್ನುತ್ತಾರೆ?
ವಿಷ್ಣುವರ್ಧನ್
-ತೀರ್ಪನ್ನು
ಕೇಳಿ
ತುಂಬಾ
ಬೇಸರವಾಗಿದೆ.
ಹಂಚಿಕೊಳ್ಳುವುದರಲ್ಲಿ
ಕನ್ನಡಿಗರು
ಎಂದೂ
ಹಿಂದೆ
ಮುಂದೆ
ನೋಡುವುದಿಲ್ಲ.
ಆದರೆ
ಈ
ಸಲ
ನಮ್ಮ
ರೈತರಿಗೆ
ಅನ್ಯಾಯವಾಗಿದೆ.
ಹೋರಾಟಕ್ಕೆ
ನನ್ನನ್ನು
ಬಳಸಿಕೊಳ್ಳಬಹುದು.
ಯಾವುದೇ
ಕ್ಷಣದಲ್ಲಿ
ಕರೆದರೂ
ಬರಲು
ಸಿದ್ಧ.
ಶಿವರಾಜ್ ಕುಮಾರ್ -ನಮಗೆ(ಕನ್ನಡಿಗರಿಗೆ) ನೋವಾಗಿದೆ. ಆದರೆ ನೋವನ್ನು ಸಾತ್ವಿಕವಾಗಿ ವ್ಯಕ್ತಪಡಿಸೋಣ. ಹಿಂಸೆಯ ಮೂಲಕ ಅಮಾಯಕರನ್ನು ಮುಗ್ಧರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಬೇಡ. ಗಾಂಧಿ ಮಾರ್ಗವನ್ನು ಅನುಸರಿಸಿ, ನಮ್ಮ ಹಕ್ಕುಗಳ ಉಳಿಸಿಕೊಳ್ಳೋಣ.
ಅನಂತನಾಗ್ -ಮೊದಲಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಕಾವೇರಿ ನ್ಯಾಯಮಂಡಳಿಯ ತೀರ್ಪನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಕಾನೂನು ಸಮರ ಮತ್ತಿತರ ಕ್ರಮಗಳ ಮೂಲಕ ಹೋರಾಟ ನಡೆಸೋಣ.
ಅಂಬರೀಷ್ -ನಮ್ಮ ರೈತರಿಗೆ ತೀರ್ಪು ಸಮಾಧಾನ ತಂದಿಲ್ಲ. ನ್ಯಾಯಕ್ಕಾಗಿ ಹೋರಾಡೋಣ.
ದ್ವಾರಕೀಶ್ -ಕಾವೇರಿ ಮಂಡ್ಯ,ಮೈಸೂರಿಗೆ ಮಾತ್ರ ಸಂಬಂಧಿಸಿದವಳಲ್ಲ. ಈ ತೀರ್ಪಿನಿಂದ ಬೆಂಗಳೂರು ಜನರ ಕುಡಿಯುವ ನೀರಿಗೂ ಕಷ್ಟವಾಗುವ ಸಾಧ್ಯತೆಗಳಿವೆ. ಚಿತ್ರೋದ್ಯಮ ಒಗ್ಗಟ್ಟು ಪ್ರದರ್ಶಿಸಿ, ಹೋರಾಟವನ್ನು ಬೆಂಬಲಿಸಬೇಕು.
ಎಂ.ಪಿ.ಶಂಕರ್ -ಕಾನೂನು ಸಮರದಲ್ಲಿ ಸೋಲಲು ನಮ್ಮ ಸರ್ಕಾರಗಳೇ ಕಾರಣ. ಸಮರ್ಥ ದಾಖಲೆಗಳನ್ನು ಒದಗಿಸುವಲ್ಲಿ ಅದು ವಿಫಲವಾಗಿದೆ. ಈಗಲಾದರೂ ಎಲ್ಲ ರಾಜಕೀಯ ಪಕ್ಷಗಳು ರಾಜ್ಯದ ಹಿತಕ್ಕಾಗಿ ಕೈಸೇರಿಸಲಿ.
ಶ್ರೀನಿವಾಸ ಮೂರ್ತಿ -ನಮ್ಮ ಸಂಸದರು ಲೋಕಸಭೆಯಲ್ಲಿ ಏನ್ ಮಾಡುತ್ತಿದ್ದಾರೆ? ಗೋಕಾಕ್ ಚಳವಳಿ ಸ್ವರೂಪದಲ್ಲಿಯೇ ಈಗ ಕಾವೇರಿಗಾಗಿ ಹೋರಾಟ ರೂಪಿಸಬೇಕು. ಹೀಗಾದಾಗ, ಭವಿಷ್ಯದಲ್ಲಾದರೂ ನ್ಯಾಯ ಸಿಗಬಹುದು.
ದೇವರಾಜ್ -ನಮ್ಮವರ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ.