ಕಾವೇರಿ ಹೋರಾಟಕ್ಕೆ ಅಂಬಿ, ವಿಷ್ಣು ಮತ್ತಿತರರ ರಣಕಹಳೆ

ಯಾರ್ಯಾರು ಏನನ್ನುತ್ತಾರೆ?
ವಿಷ್ಣುವರ್ಧನ್ -ತೀರ್ಪನ್ನು ಕೇಳಿ ತುಂಬಾ ಬೇಸರವಾಗಿದೆ. ಹಂಚಿಕೊಳ್ಳುವುದರಲ್ಲಿ ಕನ್ನಡಿಗರು ಎಂದೂ ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಈ ಸಲ ನಮ್ಮ ರೈತರಿಗೆ ಅನ್ಯಾಯವಾಗಿದೆ. ಹೋರಾಟಕ್ಕೆ ನನ್ನನ್ನು ಬಳಸಿಕೊಳ್ಳಬಹುದು. ಯಾವುದೇ ಕ್ಷಣದಲ್ಲಿ ಕರೆದರೂ ಬರಲು ಸಿದ್ಧ.
ಶಿವರಾಜ್ ಕುಮಾರ್ -ನಮಗೆ(ಕನ್ನಡಿಗರಿಗೆ) ನೋವಾಗಿದೆ. ಆದರೆ ನೋವನ್ನು ಸಾತ್ವಿಕವಾಗಿ ವ್ಯಕ್ತಪಡಿಸೋಣ. ಹಿಂಸೆಯ ಮೂಲಕ ಅಮಾಯಕರನ್ನು ಮುಗ್ಧರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಬೇಡ. ಗಾಂಧಿ ಮಾರ್ಗವನ್ನು ಅನುಸರಿಸಿ, ನಮ್ಮ ಹಕ್ಕುಗಳ ಉಳಿಸಿಕೊಳ್ಳೋಣ.
ಅನಂತನಾಗ್ -ಮೊದಲಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಕಾವೇರಿ ನ್ಯಾಯಮಂಡಳಿಯ ತೀರ್ಪನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಕಾನೂನು ಸಮರ ಮತ್ತಿತರ ಕ್ರಮಗಳ ಮೂಲಕ ಹೋರಾಟ ನಡೆಸೋಣ.
ಅಂಬರೀಷ್ -ನಮ್ಮ ರೈತರಿಗೆ ತೀರ್ಪು ಸಮಾಧಾನ ತಂದಿಲ್ಲ. ನ್ಯಾಯಕ್ಕಾಗಿ ಹೋರಾಡೋಣ.
ದ್ವಾರಕೀಶ್ -ಕಾವೇರಿ ಮಂಡ್ಯ,ಮೈಸೂರಿಗೆ ಮಾತ್ರ ಸಂಬಂಧಿಸಿದವಳಲ್ಲ. ಈ ತೀರ್ಪಿನಿಂದ ಬೆಂಗಳೂರು ಜನರ ಕುಡಿಯುವ ನೀರಿಗೂ ಕಷ್ಟವಾಗುವ ಸಾಧ್ಯತೆಗಳಿವೆ. ಚಿತ್ರೋದ್ಯಮ ಒಗ್ಗಟ್ಟು ಪ್ರದರ್ಶಿಸಿ, ಹೋರಾಟವನ್ನು ಬೆಂಬಲಿಸಬೇಕು.
ಎಂ.ಪಿ.ಶಂಕರ್ -ಕಾನೂನು ಸಮರದಲ್ಲಿ ಸೋಲಲು ನಮ್ಮ ಸರ್ಕಾರಗಳೇ ಕಾರಣ. ಸಮರ್ಥ ದಾಖಲೆಗಳನ್ನು ಒದಗಿಸುವಲ್ಲಿ ಅದು ವಿಫಲವಾಗಿದೆ. ಈಗಲಾದರೂ ಎಲ್ಲ ರಾಜಕೀಯ ಪಕ್ಷಗಳು ರಾಜ್ಯದ ಹಿತಕ್ಕಾಗಿ ಕೈಸೇರಿಸಲಿ.
ಶ್ರೀನಿವಾಸ ಮೂರ್ತಿ -ನಮ್ಮ ಸಂಸದರು ಲೋಕಸಭೆಯಲ್ಲಿ ಏನ್ ಮಾಡುತ್ತಿದ್ದಾರೆ? ಗೋಕಾಕ್ ಚಳವಳಿ ಸ್ವರೂಪದಲ್ಲಿಯೇ ಈಗ ಕಾವೇರಿಗಾಗಿ ಹೋರಾಟ ರೂಪಿಸಬೇಕು. ಹೀಗಾದಾಗ, ಭವಿಷ್ಯದಲ್ಲಾದರೂ ನ್ಯಾಯ ಸಿಗಬಹುದು.
ದೇವರಾಜ್ -ನಮ್ಮವರ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ.


Click it and Unblock the Notifications