Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
80ಚಿತ್ರಗಳ ಖ್ಯಾತ ತಮಿಳು ನಿರ್ದೇಶಕ ಕೆ.ಶಂಕರ್ ಇನ್ನಿಲ್ಲ
ಕನ್ನಡ,
ತೆಲುಗು,
ತಮಿಳು,
ಹಿಂದಿ
ಹಾಗೂ
ಮಲಯಾಳಂ
ಸೇರಿದಂತೆ
ಸುಮಾರು
80ಕ್ಕೂ
ಹೆಚ್ಚು
ಸಿನಿಮಾಗಳನ್ನು
ನಿದೇಶಿಸಿದ್ದ
ಶಂಕರ್,
ತಮಿಳುನಾಡು
ಸರ್ಕಾರ
ನೀಡುವ
ರಾಜಾ
ಸಂದೌ
ಪ್ರಶಸ್ತಿಗೂ
ಪಾತ್ರರಾಗಿದ್ದರು.
ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರ ಕೆ.ಶಂಕರ್(80) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ನಾಲ್ವರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎವಿಎಂ ಸ್ಟುಡಿಯೋದಲ್ಲಿ ತಮಿಳು ಸಿನಿಮಾ ಸಂಕಲನಕಾರನಾಗಿ ಅವರು ಚಿತ್ರರಂಗ ಪ್ರವೇಶಿಸಿದರು. ಆನಂತರ ‘ಡಾಕ್ಟರ್’ ಸಿನಿಮಾ ಮೂಲಕ ನಿದೇಶಕರಾಗಿ ಚಿತ್ರೋದ್ಯಮಕ್ಕೆ ಪರಿಚಿತರಾದರು.
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿದೇಶಿಸಿದ್ದ ಅವರು, ತಮಿಳುನಾಡು ಸರ್ಕಾರ ನೀಡುವ ರಾಜಾ ಸಂದೌ ಪ್ರಶಸ್ತಿಗೂ ಪಾತ್ರರಾಗಿದ್ದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ-ಖ್ಯಾತನಟ ದಿವಂಗತ ಎಂ.ಜಿ.ರಾಮಚಂದ್ರನ್ ಅಭಿನಯದ ಕುದಿಯಿರುಂತ ಕೋಯಿಲ್, ಅಡಿಮೈ ಪೆಣ್ ಹಾಗೂ ಹಾಲಿ ಮುಖ್ಯಮಂತ್ರಿ-ಖ್ಯಾತನಟಿ ಜಯಲಲಿತಾ ಅಭಿನಯದ ಗೌರಿಕಲ್ಯಾಣಂನಂತಹ ಭರ್ಜರಿ ಯಶಸ್ಸು ಕಂಡ ಚಿತ್ರಗಳನ್ನು ನಿದೇಶಿಸಿದ್ದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ-ಸುಪ್ರಸಿದ್ಧ ನಟ ದಿವಂಗತ ಎನ್.ಟಿ.ರಾಮರಾವ್ ಅಭಿನಯದ ತೆಲುಗು ಪೌರಾಣಿಕ ಚಿತ್ರ ಭೂಕೈಲಾಸವನ್ನೂ ಅವರು ನಿರ್ದೇಶಿಸಿದ್ದರು.
ತಾಯ್ ಮೂಕಾಂಬಿಕೈ, ವರವಾನ್ ವಡಿವೇಲನ್ ಮೊದಲಾದ ಚಿತ್ರಗಳು ಶಂಕರ್ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿದ್ದವು.
ಮುಖಪುಟ / ಸ್ಯಾಂಡಲ್ವುಡ್