Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
80ಚಿತ್ರಗಳ ಖ್ಯಾತ ತಮಿಳು ನಿರ್ದೇಶಕ ಕೆ.ಶಂಕರ್ ಇನ್ನಿಲ್ಲ
ಕನ್ನಡ,
ತೆಲುಗು,
ತಮಿಳು,
ಹಿಂದಿ
ಹಾಗೂ
ಮಲಯಾಳಂ
ಸೇರಿದಂತೆ
ಸುಮಾರು
80ಕ್ಕೂ
ಹೆಚ್ಚು
ಸಿನಿಮಾಗಳನ್ನು
ನಿದೇಶಿಸಿದ್ದ
ಶಂಕರ್,
ತಮಿಳುನಾಡು
ಸರ್ಕಾರ
ನೀಡುವ
ರಾಜಾ
ಸಂದೌ
ಪ್ರಶಸ್ತಿಗೂ
ಪಾತ್ರರಾಗಿದ್ದರು.
ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎವಿಎಂ ಸ್ಟುಡಿಯೋದಲ್ಲಿ ತಮಿಳು ಸಿನಿಮಾ ಸಂಕಲನಕಾರನಾಗಿ ಅವರು ಚಿತ್ರರಂಗ ಪ್ರವೇಶಿಸಿದರು. ಆನಂತರ ‘ಡಾಕ್ಟರ್’ ಸಿನಿಮಾ ಮೂಲಕ ನಿದೇಶಕರಾಗಿ ಚಿತ್ರೋದ್ಯಮಕ್ಕೆ ಪರಿಚಿತರಾದರು.
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿದೇಶಿಸಿದ್ದ ಅವರು, ತಮಿಳುನಾಡು ಸರ್ಕಾರ ನೀಡುವ ರಾಜಾ ಸಂದೌ ಪ್ರಶಸ್ತಿಗೂ ಪಾತ್ರರಾಗಿದ್ದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ-ಖ್ಯಾತನಟ ದಿವಂಗತ ಎಂ.ಜಿ.ರಾಮಚಂದ್ರನ್ ಅಭಿನಯದ ಕುದಿಯಿರುಂತ ಕೋಯಿಲ್, ಅಡಿಮೈ ಪೆಣ್ ಹಾಗೂ ಹಾಲಿ ಮುಖ್ಯಮಂತ್ರಿ-ಖ್ಯಾತನಟಿ ಜಯಲಲಿತಾ ಅಭಿನಯದ ಗೌರಿಕಲ್ಯಾಣಂನಂತಹ ಭರ್ಜರಿ ಯಶಸ್ಸು ಕಂಡ ಚಿತ್ರಗಳನ್ನು ನಿದೇಶಿಸಿದ್ದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ-ಸುಪ್ರಸಿದ್ಧ ನಟ ದಿವಂಗತ ಎನ್.ಟಿ.ರಾಮರಾವ್ ಅಭಿನಯದ ತೆಲುಗು ಪೌರಾಣಿಕ ಚಿತ್ರ ಭೂಕೈಲಾಸವನ್ನೂ ಅವರು ನಿರ್ದೇಶಿಸಿದ್ದರು.
ತಾಯ್ ಮೂಕಾಂಬಿಕೈ, ವರವಾನ್ ವಡಿವೇಲನ್ ಮೊದಲಾದ ಚಿತ್ರಗಳು ಶಂಕರ್ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿದ್ದವು.
ಮುಖಪುಟ / ಸ್ಯಾಂಡಲ್ವುಡ್