Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರ ಪ್ರಶಸ್ತಿಯ ರೇಸ್ನಲ್ಲಿ ‘ಬೇರು’
ಬೆಂಗಳೂರು : 2004-05ನೇ ಸಾಲಿನ ರಾಷ್ಟ್ರಪ್ರಶಸ್ತಿ ಗೆ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಪ್ರಶಸ್ತಿಯ ರೇಸ್ನಲ್ಲಿ ಈ ಬಾರಿ ಕನ್ನಡದ ಐದು ಚಿತ್ರಗಳಿವೆ.
ಪ್ರಶಸ್ತಿಗಾಗಿ ಈ ಸಲ 107ಚಿತ್ರಗಳು ಕಣದಲ್ಲಿದ್ದು, ಕನ್ನಡ ಭಾಷೆಯ ‘ಹಸೀನಾ’, ‘ಬೇರು’, ‘ಧನ್ಯ’, ‘ಪ್ರತಿಭಾವಂತರು’ ಹಾಗೂ ‘ಮೋನಾಲಿಸಾ’ ಚಿತ್ರಗಳು ರಾಜ್ಯವನ್ನು ಪ್ರತಿನಿಧಿಸಿವೆ.
ನಾಲ್ಕು ಸ್ವರ್ಣ ಕಮಲ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ‘ಹಸೀನಾ’ , ಈ ಹಿಂದೆ ಎರಡು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪಿ. ಶೇಷಾದ್ರಿ ಅವರ ‘ಬೇರು’ಚಿತ್ರಗಳು ಪ್ರಶಸ್ತಿಯ ನಿರೀಕ್ಷೆ ಹುಟ್ಟಿಸಿವೆ. ಹೊಸ ನಿರ್ದೇಶಕರ ‘ಧನ್ಯ’ ಮತ್ತು ‘ಪ್ರತಿಭಾವಂತರು’ , ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಮೋನಾಲಿಸಾ’ ಸ್ಪರ್ಧೆಯಲ್ಲಿವೆ.
ಹಿಂದಿ ನಿರ್ದೇಶಕ ಸುಧೀರ್ ಮಿಶ್ರಾ ಅಧ್ಯಕ್ಷತೆಯ ಆಯ್ಕೆ ಸಮಿತಿ ಪ್ರಶಸ್ತಿಗಳನ್ನು ನೀಡಲಿದೆ. ಈ ಬಾರಿ ನಿರ್ದೇಶಕ ನಾಗಾಭರಣ ಹಾಗೂ ನಿರ್ಮಾಪಕ ಸರೋವರ್ ಸಂಜೀವ್ ಆಯ್ಕೆ ಸಮಿತಿಯಲ್ಲಿದ್ದಾರೆ. ಜುಲೈ ಎರಡನೆಯ ವಾರದಲ್ಲಿ ಪ್ರಶಸ್ತಿಗಳು ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
(ಏಜನ್ಸೀಸ್)
ಮುಖಪುಟ / ಸ್ಯಾಂಡಲ್ವುಡ್