Don't Miss!
- News Neha Murder Case: ವೈಯಕ್ತಿಕ ಕಾರಣಕ್ಕೆ ವಿದ್ಯಾರ್ಥಿನಿ ನೇಹಾ ಕೊಲೆ ಎಂದ ಸಿಎಂ ಸಿದ್ದರಾಮಯ್ಯ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಸೈನೈಡ್’ -: ಇದು ರಾಜೀವ್ ಗಾಂಧಿ ಹಂತಕರ ಒಳನೋಟ!
ಹೌದು, ಬಹು ನಿರೀಕ್ಷಿತ ‘ಸೈನೈಡ್’ ಚಿತ್ರ ಶುಕ್ರವಾರ(ಜು.7) ರಾಜ್ಯದೆಲ್ಲೆಡೆ ತೆರೆಕಾಣುತ್ತಿದೆ. ಕತೆ, ಚಿತ್ರಕತೆ, ಸಂಭಾಷಣೆ ನಿರ್ದೇಶನದ ಹೊಣೆ ಹೊತ್ತ ಎ.ಎಂ.ಆರ್.ರಮೇಶ್ ಚಿತ್ರಕ್ಕಾಗಿ ಸಾಕಷ್ಟು ಹೋಮ್ವರ್ಕ್ ಮಾಡಿದ್ದಾರೆ. ಹೀಗಾಗಿ ಚಿತ್ರ, ನಮ್ಮನ್ನು ಸದ್ದಿಲ್ಲದೇ ಆವರಿಸಿಕೊಳ್ಳುತ್ತದೆ ಎಂಬುದು ಪ್ರೀಮಿಯರ್ ಶೋ ನೋಡಿದವರ ಅನಿಸಿಕೆ.
ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಹತ್ಯೆ ನಡೆದದ್ದು ಒಂದು ಘಟ್ಟವಾದರೇ, ರಾಜೀವ್ ಹಂತಕರಾದ ಶಿವರಸನ್ ಮತ್ತು ಅವನ ತಂಡ ಬೆಂಗಳೂರಿನಲ್ಲಿ ಪೊಲೀಸರಿಗೆ ಬಲಿಯಾದದ್ದು ಇನ್ನೊಂದು ಘಟ್ಟ. ಕೋಣನಕುಂಟೆಯಲ್ಲಿ ನಡೆದ ಈ ಘಟನೆ, ಅದರ ಹಿನ್ನೋಟ ಮತ್ತು ಒಳನೋಟಗಳನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಪಾತ್ರವೇ ತಾವಾದಂತೆ ಕಲಾವಿದರು ಜೀವ ತುಂಬಿದ್ದಾರೆ. ತಂತ್ರಜ್ಞರ ಕುಸುರಿಕಲೆ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ ಎಂಬ ಮಾತುಗಳು ಚಿತ್ರದ ಬಗ್ಗೆ ಕೇಳಿ ಬರುತ್ತಿವೆ.
ರವಿ ಕಾಳೆ(ಶಿವರಸನ್), ಶುಭಾ(ಮಾಳವಿಕಾ), ರಂಗಾಯಣ ರಘು(ರಂಗನಾಥ), ತಾರಾ(ಮೃದುಳಾ), ಸುರೇಶ್ ಹೆಬ್ಲೀಕರ್(ಪೊಲೀಸ್ ಕಮಿಷನರ್), ಅಶೋಕ್ರಾವ್, ಅವಿನಾಶ್ ಮತ್ತಿತರರು ಚಿತ್ರದ ತಾರಗಣದಲ್ಲಿದ್ದಾರೆ. ಸಂದೀಪ್ ಚೌಟ ಸಂಗೀತ ಚಿತ್ರಕ್ಕಿದೆ. ‘ಸೈನೈಡ್’ ಅಕ್ಷರ ಕ್ರಿಯೇಷನ್ನ ಮೊದಲ ಪ್ರಯತ್ನ. ತನ್ನ ಚೊಚ್ಚಲ ಪ್ರಯತ್ನವನ್ನು ಅಕ್ಷರ ಕ್ರಿಯೇಷನ್, ಕರ್ನಾಟಕ ಪೊಲೀಸರಿಗೆ ಅರ್ಪಿಸಿದೆ.
ನಗರದ ತ್ರಿಭುವನ್, ಪಿವಿಅರ್, ಚಂದ್ರೋದಯ, ಸಿದ್ದೇಶ್ವರ, ಕೃಷ್ಣ, ನವರಂಗ್, ಭಾರತಿ ಚಿತ್ರಮಂದಿರಗಳು ಸೇರಿದಂತೆ ರಾಜ್ಯದ ವಿವಿಧೆಡೆ ‘ ಸೈನೈಡ್’ ಪ್ರದರ್ಶನ ಕಾಣಲಿದೆ.
ಮುಖಪುಟ / ಸ್ಯಾಂಡಲ್ವುಡ್