twitter
    For Quick Alerts
    ALLOW NOTIFICATIONS  
    For Daily Alerts

    ಗೋಲ್ಡನ್ ಸ್ಟಾರ್ ಗಣೇಶ್ ಹೆತ್ತವರ ಗೋಳಿನ ಕಥೆ

    By Staff
    |

    ಆ ಗಣೇಶ(ದೇವಲೋಕದ ಗಣೇಶ) ಹೆತ್ತವರೇ ತನ್ನ ಪಾಲಿಗೆ ಎಲ್ಲಾ ಎಂದು ಅವರಿಗೆ ಪ್ರದಕ್ಷಿಣೆ ಹಾಕಿ ಮಾದರಿಯಾದ. ಈ ಗಣೇಶ ಹೆತ್ತವರ ಕಣ್ಣಲ್ಲಿ ನೀರು ಬರೆಸಿ, ಊರಿಗೆ ಮಾರಿಯಾದ. ಮುತ್ತು ಕೊಡೊಳು ಬಂದಾಗ ತುತ್ತುಕೊಟ್ಟವಳ ಮರೀಬೇಡ ಎಂದು ಕನ್ನಡ ಚಿತ್ರವೊಂದರಲ್ಲಿ ಬಂದ ಗೀತೆಗೆ ಈಗ ಜೀವ ಬಂದಿದೆ. ನಮ್ಮ ನಿಮ್ಮೆಲ್ಲರ ಮೆಚ್ಚಿನ ನಟ ಗಣೇಶನ ಕಥೆ ಮುಂದಿದೆ ಓದಿ.

    *ದಟ್ಸ್ ಸಿನಿ ಡೆಸ್ಕ್

    ಒಬ್ಬ ಸಾಮಾನ್ಯ ಮನುಷ್ಯನಿಗೆ ಹಣ, ಖ್ಯಾತಿ, ಜನಪ್ರಿಯತೆ, ಶ್ರೀಮಂತಿಕೆ ಏಕಕಾಲದಲ್ಲಿ ಎಲ್ಲವೂ ಒಟ್ಟೊಟ್ಟಿಗೆ ಬಂದರೆ ಏನಾಗಬಹುದು? ಒಂದು ತನ್ನವರನ್ನು ಮರೆಯಬಹುದು! ಆತನಿಗೆ ಯಾರು ಕಾಣದಿರುವಂತಹ ಅಮಲು ಏರಬಹುದು! ಆತನ ಬೆಳೆವಣಿಗೆಗೆ ಕಾರಣರಾದವರನ್ನು ಕೇರ್ ಮಾಡದಿರಬಹುದು! ಕೀರ್ತಿ ಶನಿ ಹೆಗಲಿಗೇರಿಸಿಕೊಂಡಿರುವ ಗೋಲ್ಡನ್ ಸ್ಟಾರ್, ಕಾಮಿಡಿ ಟೈಮ್ ಗಣೇಶ್ ಕೂಡಾ ಇದಕ್ಕೆ ಹೊರತಲ್ಲ. ಹೆತ್ತವರನ್ನು ಆತ ಕಡೆಗಣಿಸಿದ್ದಾನೆ. ಮದುವೆಯಾದ ನಂತರ ಊರಿಗೆ ಬಂದದ್ದೇ ಇಲ್ಲ ಎಂದು ಗಣೇಶನ ಗಾಡ್ ಫಾದರ್ ನಿರ್ಮಾಪಕ ಈ. ಕೃಷ್ಣಪ್ಪ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ನಮಗೆ ತುಂಬಾ ಅಭಿಮಾನ ಸಾರ್, ಯಾವ ಗಾಡ್‌ಫಾದರ್ ಇಲ್ಲದೇ ಚಿತ್ರರಂಗದಲ್ಲಿ ಇಷ್ಟೇತ್ತರಕ್ಕೆ ಬೆಳದಿದ್ದಾನಲ್ಲ. ಭಾರಿ ಹೆಮ್ಮೆ ಸಾರ್ ನಮಗೆ, ಪ್ರತಿಭೆ ಇದ್ದರೇ, ಅವಕಾಶ ಸಿಕ್ಕರೇ ನಮ್ಮ ಗಣೇಶ್‌ನಂಥ ನೂರಾರು ಜನರು ಮಿಂಚುವುದರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ ಎಂದಿತಲ್ಲ ಪ್ರಾಜ್ಞರ ಗುಂಪೊಂದು. ಏಯ್ ಅವನು ನಮ್ಮ ಗಣೇಶ್, ಹೊತ್ತಿಲ್ಲದ ಹೊತ್ತಿನಲ್ಲಿ ಫೋನ್ ಮಾಡಿ ನಮ್ಮ ತಲೆ ತಿಂದ ಹುಡುಗ, ಎಷ್ಟೇತ್ತರಕ್ಕೆ ಬೆಳದಾ ನೋಡ್ರೀ ತುಂಬಾ ಸಂತೋಷವಾಗುತ್ತೇರಿ ಅವನ್ನ ಕಂಡ್ರೇ. ಆತನ ಸಿನಿಮಾಗಳನ್ನು ನೋಡಿದರೆ ಖುಷಿ ಅನ್ನುವ ಹೆಂಗೆಳೆಯರ, ಯುವತಿಯರು ರಾಜ್ಯಾದ್ಯಂತ ಕಡಿಮೆ ಸಂಖ್ಯೆಯಲ್ಲಿ ಎನಿಲ್ಲ.

    ನಿಜ ಗಣೇಶ್ ಕಳೆದ ಮೂರು ವರ್ಷದಲ್ಲಿ ಆತ ಬೆಳೆದ ರೀತಿಯೇ ಹಾಗಿತ್ತು. ಕಿರುತೆರೆಯೊಂದರಲ್ಲಿ ಕಾಮಿಡಿ ಟೈಮ್ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಹುಡುಗ ಚಿತ್ರರಂಗದಲ್ಲಿ ಘಟಾನುಘಟಿ ನಾಯಕ ನಟರ ಮಕ್ಕಳನ್ನು ಹಿಂದಿಕ್ಕಿ ಸೈ ಅನ್ನಿಸಿಕೊಳ್ಳುವುದು ಸಾಮಾನ್ಯ ಮಾತಲ್ಲ. ಕಾಲೆಳೆಯುವ ಮಂದಿಯಿಂದ ತುಂಬಿರುವ ಕನ್ನಡ ಚಿತ್ರೋಧ್ಯಮದಲ್ಲಿ ಆಕಾಶಕ್ಕೆ ಬೆಳದು ನಿಂತ ನೋಡಿ. 'ಮುಂಗಾರುಮಳೆ' ಕೊಟ್ಟ ಬ್ರೇಕ್ ಗಣೇಶ್ ನನ್ನ ಸ್ಟಾರ್ ನಟನನ್ನಾಗಿಸಿತು. ಹಣ, ಜನಪ್ರಿಯತೆ, ಒಂದರ ಮೇಲೊಂದು ಹಿಟ್ ಸಿನಿಮಾ ಇನ್ನೇನು ಬೇಕು? ಗಣೇಶ್ ನಟಿಸಿದ 'ಅರಮನೆ' ಚಿತ್ರ ಅಂತ ಹೇಳಿಕೊಳ್ಳುವಂಥ ಚಿತ್ರವಲ್ಲದಿದ್ದರೂ ಆತನ ಆರಾಧಿಸುವ ಅಭಿಮಾನಿ ಪಡೆ ಚಿತ್ರವನ್ನು ಯಶಸ್ವಿಗೊಳಿಸಿತು. ಸತತ ಏಳು ಚಿತ್ರಗಳ ಗೆಲುವು ಕಂಡ ಒಬ್ಬ ನಟನಿಗೆ ಇನ್ನೇನು ಬೇಕು ಹೇಳಿ. ಜತೆಗೆ ಯಾರ ಹಂಗು ನನಗ್ಯಾಕೆ ಎನ್ನುವ 'ಅಹಂ' ಗಣೇಶ್‌ನಲ್ಲಿ ಮನೆ ಮಾಡಿತು.

    ಆದರೆ ಈ ಎಲ್ಲ ನಡುವೆ ಒಂದು ವಿಷಾದಕರ ಸುದ್ದಿ ಅಡಕಮಾರನಹಳ್ಳಿಯಿಂದ ಬಂದಿದೆ. ಅದು ಆತನನ್ನು ಆರಾಧಿಸುವ ಅಭಿಮಾನಿಗಳಿಗೆ, ಇಷ್ಟಪಡುವವರಿಗೆ ಸಿಟ್ಟು ಬರಿಸುವಂತ ಸುದ್ದಿ ಕಂಡ್ರಿ. ನಮ್ಮೆಲ್ಲರ ಅಚ್ಚುಮೆಚ್ಚಿನ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಂತೆ. ಅಡಕಮಾರನಹಳ್ಳಿ ಹೋಗಿ ತಿಂಗಳುಗಳೇ ಕಳೆದಿವೆಯಂತೆ. ತಾನಾಯಿತು, ತನ್ನ ಸಿನಿಮಾವಾಯಿತು ಎಂಬಷ್ಟರ ಮಟ್ಟಿಗೆ ಗಣೇಶ್ ಮಗ್ನನಾಗಿದ್ದಾನಂತೆ ಎಂಬ ಅಂತೆ ಕಂತೆಗಳ ಸಂತೆ ನೆರೆದಿದೆ.

    ಸ್ವಂತ ಅವರ ತಂದೆ ಈ ವಿಷಯವನ್ನು 'ಮುಂಗಾರುಮಳೆ' ಚಿತ್ರದ ನಿರ್ಮಾಪಕ ಈ. ಕೃಷ್ಣಪ್ಪ ಅವರೆದುರಿಗೆ ಹೇಳಿ ಗೋಳಾಡಿದ್ದಾರೆ. ಮೊನ್ನೆ ನಡೆದ 'ಮೊಗ್ಗಿನ ಮನಸ್ಸು' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಪ್ಪ ಪತ್ರಕರ್ತರೆದುರು ನಮ್ಮ ಸ್ಟಾರ್ ನಟ ಹೀಗೆ ಮಾಡಿದ್ದಾನೆ ನೋಡಿ ಸರೀನಾ ಅವನು ಮಾಡಿದ್ದು ಅಂತ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಎಂತಹ ಖ್ಯಾತಿ, ಶ್ರೀಮಂತಿಕೆ ಬಂದರೂ ಹೆತ್ತವರನ್ನು ಕಡೆಗಣಿಸಬಾರದು. ನಿಮಗೆ ಒಂದು ಸತ್ಯವನ್ನು ಹೇಳುತ್ತೇನೆ, ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಯುತ್ತಿರುವ ಗಣೇಶ್, ಅತ್ತ ಅಡಕಮಾರನಹಳ್ಳಿಯಲ್ಲಿ ಆತನ ತಂದೆತಾಯಿಗಳು ಬಾಡಿಗೆ ಮನೆಯಲ್ಲಿ ಕಾಲ ದೂಡುತ್ತಿದ್ದಾರೆ.(ತಿಂಗಳಿಗೆ ಸುಮಾರು 2 ಸಾವಿರ) ಊರಿನಲ್ಲಿ ಮೂರಂತಸ್ತಿನ ಮನೆ ಕಟ್ಟಲು ಶುರು ಮಾಡಿದ್ದ ಗಣೇಶ ಮತ್ತೆ ಆ ಕಡೆ ತಿರುಗಿಲ್ಲ. ಮೊನ್ನೆ ಹುಟ್ಟು ಹಬ್ಬದ ದಿನದಂದು ಊರಿಗೆ ಕರೆ ಮಾಡಿಲ್ಲ. ಗಣೇಶ ಅವರ ಅಪ್ಪ ಮಗನಿಗಾಗಿ ಮೊದಲ ಬಾರಿಗೆ ಕೊಡಿಸಿದ ಸುಜುಕಿ ಸಮುರಾಯ್ ಬೈಕನ್ನು ಕೇಳುವವರಿಲ್ಲ. ಬೆಂಗಳೂರಿನ ಜಯನಗರ ಹಾಗೂ ಇನ್ನೊಂದೆಡೆ ಎರಡೆರಡು ಮನೆ ಕಟ್ಟಿಸುವಲ್ಲಿ ನಿರತನಾಗಿರುವ ಗಣೇಶ್‌ಗೆ ಇದರ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಇನ್ನು ಬೆನ್ನಿಗೆ ಬಿದ್ದ ಇಬ್ಬರು ತಮ್ಮಂದಿರಿದ್ದಾರೆ. ಅವರ ನೋಡಿಕೊಳ್ಳುವ ಜವಾಬ್ದಾರಿಯಿದೆ. ಬೆಂಗಳೂರಿಗೆ ಕೆಲಸಕ್ಕೆ ಬರುವ ದೊಡ್ಡ ತಮ್ಮನಿಂದ ಗಣೇಶ್ ಬಗ್ಗೆ ಸುದ್ದಿ ತಿಳಿದು ಬರುತ್ತಿದೆ ಅಷ್ಟೆ.ಅದರೆ ಗಣೇಶನ ಇತ್ತೀಚಿನ ವರ್ತನೆಗಳು ಬೇಸರ ತರುವಂತಿವೆ ಎನ್ನುತ್ತಾರೆ ಕೃಷ್ಣಪ್ಪ.

    ಗೋಲ್ಡನ್ ಸ್ಟಾರ್ ಗಣೇಶ್ ಮೂದಲಿನ ಗಣೇಶ್ ಅಲ್ಲ. ಕೈಗೆಟುಕದ ಎತ್ತರಕ್ಕೇರಿರುವ ಗೋಲ್ಡನ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಹುಟ್ಟುಹಬ್ಬದ ದಿನದಂದು ದಾನಧರ್ಮಗಳನ್ನು ಮಾಡಿ ಪ್ರಚಾರ ಗಿಟ್ಟಿಸಿಕೊಂಡ ಗಣೇಶ್‌ಗೆ ತನ್ನ ಪಾಲಕರನ್ನು ಆದರಿಸಬೇಕೆಂಬ ಧರ್ಮ ಮರೆತುಹೋಯಿತೆ? ಆತ ಬರೀ ನಟ ಮಾತ್ರವಲ್ಲ. ಜವಾಬ್ದಾರಿಯುತ ವ್ಯಕ್ತಿ ಅನ್ನುವುದನ್ನು ಅರಿಯಬೇಕು. ಸ್ಟಾರ್‌ಗಿರಿ ಎಷ್ಟು ದಿನದ್ದು, ಹೆತ್ತವರು ಮುಖ್ಯ ಅನ್ನುವುದನ್ನು ಹೇಗೆ ಹೇಳುವುದು. ಜೀವ ನೀಡಿದವರು ದೇವರಿಗಿಂತ ದೊಡ್ಡವರು ಅನ್ನುವುದನ್ನು ಮರೆಯಬಾರದು ಅಲ್ವೇ?

    Friday, March 29, 2024, 7:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X