twitter
    For Quick Alerts
    ALLOW NOTIFICATIONS  
    For Daily Alerts

    ವೀರಪ್ಪನ್ ರಾಣಿಯಾಗಿ ಬೆಳಗಾವಿ ಬಾಲೆ ಲಕ್ಷ್ಮಿ ರೈ

    By Rajendra
    |

    ಕಾಡುಗಳ್ಳ, ನರಹಂತಹ, ದಂತಚೋರ, ಮೀಸೆಮಾವ ವೀರಪ್ಪನ್ ಕಾಡಿನ ರಾಣಿಯಾಗಿ ಬೆಳಗಾವಿ ಬಾಲೆ ಲಕ್ಷ್ಮಿ ರೈ ಕಾಣಿಸಿಕೊಳ್ಳಲಿದ್ದಾರೆ. 'ಸೈನೈಡ್' ಖ್ಯಾತಿಯ ಎಎಂಆರ್ ರಮೇಶ್ ನಿರ್ದೇಶಿಸುತ್ತಿರುವ 'ಅಟ್ಟಹಾಸ' ಚಿತ್ರದಲ್ಲಿ ಮುತ್ತುಲಕ್ಷ್ಮಿಯಾಗಿ ಲಕ್ಷ್ಮಿ ರೈ ಅಭಿನಯಿಸಲಿದ್ದಾರೆ.

    'ಅಟ್ಟಹಾಸ' ಚಿತ್ರದಲ್ಲಿ ಮುತ್ತುಲಕ್ಷ್ಮಿ ಪಾತ್ರವನ್ನು ವಿಜಯಲಕ್ಷ್ಮಿ, ಪ್ರಿಯಾಮಣಿ, ರಮ್ಯಾ ಪೋಷಿಸಲಿದ್ದಾರೆ ಎಂಬ ಸುದ್ದಿ ಇತ್ತು. ಈಗ ಆ ಪಾತ್ರಕ್ಕೆ ಲಕ್ಷ್ಮಿ ರೈ ಆಯ್ಕೆಯಾಗಿದ್ದಾರೆ ಎನ್ನುತ್ತವೆ ಮೂಲಗಳು. ವೀರಪ್ಪನ್ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸುತ್ತಿರುವುದು ಗೊತ್ತೇ ಇದೆ.

    ಉಳಿದಂತೆ ರಾಜ್ ಕುಮಾರ್ ಪಾತ್ರವನ್ನು ಸುರೇಶ್ ಒಬೆರಾಯ್, ಪಾರ್ವತಮ್ಮ ಪಾತ್ರದಲ್ಲಿ ಸುಲಕ್ಷಣಾ ಕಾಣಿಸಲಿದ್ದಾರೆ. ವೀರಪ್ಪನ್ 'ಅಟ್ಟಹಾಸ' ಚಿತ್ರ ಜನವರಿ 26, 2012ರ ಗಣರಾಜ್ಯೋತ್ಸವಕ್ಕೆ ತೆರೆಕಾಣಲಿದೆ. ರಾಜ್‌ಕುಮಾರ್ ಅವರ ಸಹವರ್ತಿಯಾಗಿ 24ವರ್ಷ ಅವರೊಂದಿಗಿದ್ದ ನಾಗಪ್ಪ ಮಾರಡಗಿ ಅವರೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂದೀಪ್ ಚೌಟ ಅವರ ಸಂಗೀತ, ವಿಜಯ್ ಮಿಲ್ಬನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)

    English summary
    It's not Priyamani or Divya Spandana, but Lakshmi Rai who would play the female lead in 'Attahasa', a biopic on forest brigand Veerapan, directed by AMR Ramesh of 'Cyanide' fame. In other words, the actress will play the role of Veerapan's wife in this movie.
    Monday, November 7, 2011, 15:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X