ಗಾಂಧಿನಗರಕ್ಕೆ ನಿರ್ಮಾಪಕಿಯಾಗಿ ರಾಧಿಕಾ ಆಗಮನ
ನಟಿ ರಾಧಿಕಾ ಬಾಣಂತನ ಮುಗಿಸಿಕೊಂಡು ಈಗ ಗಾಂಧಿನಗರಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಅವರು ತೆರೆ ಮುಂದೆ ಬರುತ್ತಿಲ್ಲ. ನಿರ್ಮಾಪಕಿಯಾಗಿ ತೆರೆಹಿಂದೆ ಸರಿದಿದ್ದಾರೆ. ತನ್ನ ಸೋದರ ರವಿರಾಜ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ 'ಬೆಂಗಳೂರು 79' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಚ್ ಎಸ್ ಸಹನ.
ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಾಸ್ ಚಿತ್ರ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ಸತ್ಯ ಘಟನೆ ಆಧಾರವಾಗಿ ಚಿತ್ರ ತೆರೆಗೆ ಬರುಲಿದೆ. "ಬಿವೇರ್ ಆಫ್ ಕ್ರಿಮಿನಲ್ಸ್" ಎಂಬುದು ಚಿತ್ರದ ಅಡಿಬರಹ. ಅನೀಶ್ ತೇಜೇಶ್ವರ್ ಹಾಗೂ ಅಭಿನಯಾ ಚಿತ್ರದ ಪ್ರಮುಖ ಪಾತ್ರಧಾರಿಗಳು. ಉಳಿದಂತೆ ರವಿಕಾಳೆ, ಅಜಯ್, ಸಾಧು ಕೋಕಿಲ, ಜಗದೀಶ್, ಸಂಪತ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಚಿತ್ರದ ತಾಂತ್ರಿಕ ಬಳಗದಲ್ಲಿ ಗುರುಪ್ರಶಾಂತ್ ರೈ ಛಾಯಾಗ್ರಹಣ, ದೇವಿಕೃಪಾ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.ಚಿತ್ರದ ನಾಯಕ ನಟ ಅನೀಶ್ ಅವರು 'ನಮ್ ಏರಿಯಾಲ್ ಒಂದಿನ' ಹಾಗೂ 'ಪೊಲೀಸ್ ಕ್ವ್ವಾಟ್ರಸ್' ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗಾಗಲೆ ಬೆಂಗಳೂರು ಭೂಗತ ಜಗತ್ತಿನ ಬಗ್ಗೆ, ರೌಡಿಯಿಸಂ ಬಗ್ಗೆ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಬೆಂಗಳೂರು 79 ಚಿತ್ರದಲ್ಲಿ ವಿಶೇಷ ಏನಿರಬಹುದು? ಎಂಬ ಸಣ್ಣ ಕುತೂಹಲವಂತೂ ಇದ್ದೇ ಇದೆ.


Click it and Unblock the Notifications











