Don't Miss!
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿನಗರಕ್ಕೆ ನಿರ್ಮಾಪಕಿಯಾಗಿ ರಾಧಿಕಾ ಆಗಮನ
ನಟಿ ರಾಧಿಕಾ ಬಾಣಂತನ ಮುಗಿಸಿಕೊಂಡು ಈಗ ಗಾಂಧಿನಗರಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಅವರು ತೆರೆ ಮುಂದೆ ಬರುತ್ತಿಲ್ಲ. ನಿರ್ಮಾಪಕಿಯಾಗಿ ತೆರೆಹಿಂದೆ ಸರಿದಿದ್ದಾರೆ. ತನ್ನ ಸೋದರ ರವಿರಾಜ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ 'ಬೆಂಗಳೂರು 79' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಚ್ ಎಸ್ ಸಹನ.
ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಾಸ್ ಚಿತ್ರ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ಸತ್ಯ ಘಟನೆ ಆಧಾರವಾಗಿ ಚಿತ್ರ ತೆರೆಗೆ ಬರುಲಿದೆ. "ಬಿವೇರ್ ಆಫ್ ಕ್ರಿಮಿನಲ್ಸ್" ಎಂಬುದು ಚಿತ್ರದ ಅಡಿಬರಹ. ಅನೀಶ್ ತೇಜೇಶ್ವರ್ ಹಾಗೂ ಅಭಿನಯಾ ಚಿತ್ರದ ಪ್ರಮುಖ ಪಾತ್ರಧಾರಿಗಳು. ಉಳಿದಂತೆ ರವಿಕಾಳೆ, ಅಜಯ್, ಸಾಧು ಕೋಕಿಲ, ಜಗದೀಶ್, ಸಂಪತ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಚಿತ್ರದ ತಾಂತ್ರಿಕ ಬಳಗದಲ್ಲಿ ಗುರುಪ್ರಶಾಂತ್ ರೈ ಛಾಯಾಗ್ರಹಣ, ದೇವಿಕೃಪಾ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.ಚಿತ್ರದ ನಾಯಕ ನಟ ಅನೀಶ್ ಅವರು 'ನಮ್ ಏರಿಯಾಲ್ ಒಂದಿನ' ಹಾಗೂ 'ಪೊಲೀಸ್ ಕ್ವ್ವಾಟ್ರಸ್' ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗಾಗಲೆ ಬೆಂಗಳೂರು ಭೂಗತ ಜಗತ್ತಿನ ಬಗ್ಗೆ, ರೌಡಿಯಿಸಂ ಬಗ್ಗೆ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಬೆಂಗಳೂರು 79 ಚಿತ್ರದಲ್ಲಿ ವಿಶೇಷ ಏನಿರಬಹುದು? ಎಂಬ ಸಣ್ಣ ಕುತೂಹಲವಂತೂ ಇದ್ದೇ ಇದೆ.