twitter
    For Quick Alerts
    ALLOW NOTIFICATIONS  
    For Daily Alerts

    ಗಾಂಧಿನಗರಕ್ಕೆ ನಿರ್ಮಾಪಕಿಯಾಗಿ ರಾಧಿಕಾ ಆಗಮನ

    By Rajendra
    |

    ನಟಿ ರಾಧಿಕಾ ಬಾಣಂತನ ಮುಗಿಸಿಕೊಂಡು ಈಗ ಗಾಂಧಿನಗರಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಅವರು ತೆರೆ ಮುಂದೆ ಬರುತ್ತಿಲ್ಲ. ನಿರ್ಮಾಪಕಿಯಾಗಿ ತೆರೆಹಿಂದೆ ಸರಿದಿದ್ದಾರೆ. ತನ್ನ ಸೋದರ ರವಿರಾಜ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ 'ಬೆಂಗಳೂರು 79' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಚ್ ಎಸ್ ಸಹನ.

    ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಾಸ್ ಚಿತ್ರ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದ ಸತ್ಯ ಘಟನೆ ಆಧಾರವಾಗಿ ಚಿತ್ರ ತೆರೆಗೆ ಬರುಲಿದೆ. "ಬಿವೇರ್ ಆಫ್ ಕ್ರಿಮಿನಲ್ಸ್" ಎಂಬುದು ಚಿತ್ರದ ಅಡಿಬರಹ. ಅನೀಶ್ ತೇಜೇಶ್ವರ್ ಹಾಗೂ ಅಭಿನಯಾ ಚಿತ್ರದ ಪ್ರಮುಖ ಪಾತ್ರಧಾರಿಗಳು. ಉಳಿದಂತೆ ರವಿಕಾಳೆ, ಅಜಯ್, ಸಾಧು ಕೋಕಿಲ, ಜಗದೀಶ್, ಸಂಪತ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.

    ಚಿತ್ರದ ತಾಂತ್ರಿಕ ಬಳಗದಲ್ಲಿ ಗುರುಪ್ರಶಾಂತ್ ರೈ ಛಾಯಾಗ್ರಹಣ, ದೇವಿಕೃಪಾ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.ಚಿತ್ರದ ನಾಯಕ ನಟ ಅನೀಶ್ ಅವರು 'ನಮ್ ಏರಿಯಾಲ್ ಒಂದಿನ' ಹಾಗೂ 'ಪೊಲೀಸ್ ಕ್ವ್ವಾಟ್ರಸ್' ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗಾಗಲೆ ಬೆಂಗಳೂರು ಭೂಗತ ಜಗತ್ತಿನ ಬಗ್ಗೆ, ರೌಡಿಯಿಸಂ ಬಗ್ಗೆ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಬೆಂಗಳೂರು 79 ಚಿತ್ರದಲ್ಲಿ ವಿಶೇಷ ಏನಿರಬಹುದು? ಎಂಬ ಸಣ್ಣ ಕುತೂಹಲವಂತೂ ಇದ್ದೇ ಇದೆ.

    English summary
    After a long break actress Radhika back to Gandhinagar. But this time she has not acting in a film producing film titled as Bangalore 79. The caption for the title says Beware of Criminals! Newcomer HS Sahana is directing the film with Guruprashanth Rai as cameraman and Devi Krupa as music director.
    Friday, April 8, 2011, 11:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X