Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್
ಬಸವರಾಜ್ ಪಾಲಿಗೆ ಮಾತೆತ್ತಿದರೆ ಅಮೂಲ್ಯ, ಕೂತು ನಿಂತರೆ, ಊಟ ನಿದ್ದೆಯಲ್ಲಿ ಎಲ್ಲೆಲ್ಲೂ ಅಮೂಲ್ಯ ಆವರಿಸಿಕೊಂಡಿದ್ದಾರೆ. ಈತನನ್ನೇ ನಂಬಿಕೊಂಡು ಜೀವನಬಂಡಿ ಸಾಗಿಸುತ್ತಿರುವ ಕುಟುಂಬ ಏನು ಮಾಡುವುದೆಂದು ತೋಚದೆ ಕಂಗಾಲಾಗಿವೆ.
ಚಿತ್ರವನ್ನು ಮೂರು ಬಾರಿ ನೋಡಿದ ಬಸವರಾಜ್ ಬರಬರುತ್ತಾ ಅಮೂಲ್ಯಾ ಗುಂಗಿಗೆ ಒಳಗಾಗಿದ್ದಾನೆ. ಒಂದೆರಡು ದಿನಗಳ ನಂತರ ಸುಧಾರಿಸಿಕೊಳ್ಳ ಬಹುದು ಎನ್ನುವ ಕುಟುಂಬದ ನಂಬಿಕೆ ಹುಸಿಯಾಗಿದೆ. ದಿಕ್ಕೇ ತೋಚದ ಕುಟುಂಬದ ಗೋಳು ನೋಡಲಾಗದು. ಹಲವು ವರ್ಷಗಳಿಂದ ಬಸವರಾಜ್ ಕುಟುಂಬಕ್ಕೆ ಈ ನೋವಿನಿಂದ ಹೊರಬರಲಾಗುತ್ತಿಲ್ಲ.
ಶಿಸ್ತಿನಿಂದ ದುಡಿದು ಕುಟುಂಬದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದ ಬಸವರಾಜ್ ಪಾಲಿಗೆ ಚೆಲುವಿನಚಿತ್ತಾರದ ನಾಯಕಿ ಅಮೂಲ್ಯ ಈಗ ಸರ್ವಶ್ವ. ತಾಯಿ, ತಂಗಿ, ನೆಂಟರಿಷ್ಟರು, ಆಜುಬಾಜಿನವರು ಏನೇ ಮಾತಾಡಿದರೂ ಬಸವರಾಜ್ ಉತ್ತರ..ಅಮೂಲ್ಯ .. ಅಮೂಲ್ಯ..ಅಮೂಲ್ಯ.
ಈ ಚಿತ್ರ ಬಿಡುಗಡೆಯಾದಾಗ ಬಹಳಷ್ಟು ಪ್ರೇಮಿಗಳು ಮನೆಯಿಂದ ಪರಾರಿಯಾದ ಘಟನೆ ನಿಮಗೆ ಗೊತ್ತಿರುವ ವಿಚಾರ. ಆ ಪಟ್ಟಿಗೆ ಇದು ಮತ್ತೊಂದು ಸೇರ್ಪಡೆ, ಆದರೆ ಚಿತ್ರಕಥೆ ಬೇರೆಯಷ್ಟೇ. ಚಿತ್ರರಸಿಕರು ಚಿತ್ರವನ್ನು ಒಂದು ಮನೋರಂಜನೆಗಾಗಿ ನೋಡಿ ಅದರಲ್ಲಿರುವ ಒಳ್ಳೆತನವನ್ನು ತನ್ನದಾಗಿಸಿ ಕೊಂಡರೆ ಒಳ್ಳೆಯದಲ್ಲವೇ.. ಇಲ್ಲವಾದಲ್ಲಿ ಇಂತಹ ಇನ್ನಷ್ಟು ಲೇಖನ ನಾವು ಬರೆಯದೆ ಬೇರೆ ವಿಧಿಯಿಲ್ಲ.