Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕೀಯದಲ್ಲಿ ನಟ ಚಿರಂಜೀವಿಯ 'ಸ್ವಯಂಕೃಷಿ'
ಹೈದರಾಬಾದ್, ಫೆ.7: ನಟ ಚಿರಂಜೀವಿ ರಾಜಕೀಯ ಸೇರುತ್ತಾರಾ? ಇಲ್ಲವಾ? ಎಂಬ ಬಗ್ಗೆ ಆಂಧ್ರಪ್ರದೇಶದಲ್ಲಿ ಸುದೀರ್ಘ ಚರ್ಚೆಗಳೇ ನಡೆದು ಹೋಗಿವೆ. ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಚಿರಂಜೀವಿ ಮಾತ್ರ ತುಟಿ ಬಿಚ್ಚಿಲ್ಲ. ಎಲ್ಲದಕ್ಕೂ ಅವರ ಮೌನವೇ ಉತ್ತರವಾಗಿತ್ತು.
ಆದರೆ ಚಿರಂಜೀವಿ ಅಭಿಮಾನಿಗಳ ಸಂಘ ಚಿರಂಜೀವಿ ಹೊಸ ರಾಜಕೀಯ ಪಕ್ಷ ಕಟ್ಟುತ್ತಿರುವ ಬಗ್ಗೆ ಸುಳಿವು ನೀಡಿದೆ. ಚಿರಂಜೀವಿ ಕಟ್ಟಲಿರುವ ಹೊಸ ರಾಜಕೀಯ ಪಕ್ಷದ ಹೆಸರು 'ಸ್ವಯಂ ಕೃಷಿ' ಎಂದು. ಪಕ್ಷದ ಚಿಹ್ನೆ ಕಣ್ಣು. ಹೊಸ ಪಕ್ಷವನ್ನು ಏಪ್ರಿಲ್ 7ರಂದು ಉದ್ಘಾಟನೆ ಮಾಡಲಿರುವುದಾಗಿ ಚಿರಂಜೀವಿ ಅಭಿಮಾನಿ ಸಂಘದ ಅಧ್ಯಕ್ಷರಾದ ಸತ್ತಿಬಾಬು ಬುಧವಾರ ತಿಳಿಸಿದ್ದಾರೆ.
ಸ್ವಯಂಕೃಷಿ ಎಂಬುದು 1987ರಲ್ಲಿ ತೆರೆಕಂಡ ಚಿರಂಜೀವಿ ನಟಸಿದ ಒಂದು ಕಲಾತ್ಮಕ ಚಿತ್ರದ ಹೆಸರು. ಅದರಲ್ಲಿ ಅವರು ಓದು ಬರಹ ಬಾರದ ಬಡ ಚಮ್ಮಾರನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಮುಂದೆ ಅವರು ಪಾದರಕ್ಷೆಗಳನ್ನು ತಯಾರಿಸುವ ಕಂಪನಿಯ ಮಾಲೀಕರಾಗುತ್ತಾರೆ. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಹಾ ಸಿಕ್ಕಿತ್ತು. ಪದ್ಮಶ್ರೀ ಕೆ.ವಿಶ್ವನಾಥ್ ಚಿತ್ರವನ್ನು ನಿರ್ದೇಶಿಸಿದ್ದರು.
ಈಗಾಗಲೇ ಅವರು ಆಂಧ್ರಪ್ರದೇಶದಲ್ಲಿ ರಕ್ತದ ಬ್ಯಾಂಕ್ ಹಾಗೂ ಕಣ್ಣಿನ ಬ್ಯಾಂಕನ್ನು ಸ್ಥಾಪಿಸಿ ಸಾಕಷ್ಟು ಜನಕ್ಕೆ ನೆರವಾಗಿದ್ದಾರೆ. ಹಾಗಾಗಿ ಅವರ ಹೊಸ ಪಕ್ಷಕ್ಕೆ ಕಣ್ಣಿನ ಚಿಹ್ನೆ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.
(ಏಜೆನ್ಸೀಸ್)