twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಬಿಡುಗಡೆ ಸಂತೋಷ ತಂದಿದೆ ಎಂದ ಪುನೀತ್!

    |

    punith
    ನಟ ದರ್ಶನ್ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯ ಹಂತದಲ್ಲಿರುವ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದು ತಮಗೆ ಸಂತಸ ತಂದಿದೆ ಎಂದಿದ್ದಾರೆ. ದರ್ಶನ್ ನಂಬಿ ದುಡ್ಡುಹಾಕಿ ನಿರ್ಮಾಣಹಂತದಲ್ಲಿರುವ ಅವರ ಚಿತ್ರ ನಿರ್ಮಾಪಕರಿಗೆ ಇದರಿಂದ ಬಹಳಷ್ಟು ಸಹಾಯವಾಗಲಿದೆ ಎಂದು ಪುನೀತ್ ಹೇಳಿದ್ದಾರೆ.

    ಕೋರ್ಟ್ ಶಿಷ್ಟಾಚಾರವನ್ನು ಪಾಲಿಸಿ ಆದಷ್ಟು ಬೇಗ ದರ್ಶನ್ ಮರಳಲಿ ಎಂದಿರುವ ಪುನೀತ್ ಇದರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಾಗಲಿದೆ. ಒಬ್ಬ ನಟ ಚಿತ್ರರಂಗದ ಭಾಗವಾಗಿರುವುದರಿಂದ ನಟ ಜೈಲಿನಿಂದ ಬಿಡುಗಡೆ ಆಗಿರುವುದು ತಮಗೂ ಹಾಗೂ ಪೂರ್ಣ ಚಿತ್ರರಂಗಕ್ಕೂ ಸಹಜವಾಗಿಯೇ ಸಂತಸದ ವಿಷಯ ಎಂದಿದ್ದಾರೆ, ಈ ಪರಮಾತ್ಮ.

    ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ 'ಸಾರಥಿ' ಯಿಂದ ದರ್ಶನ್ ಜವಾಬ್ಧಾರಿ ಇನ್ನಷ್ಟು ಹೆಚ್ಚಿದೆ. ಹಾಗಾಗಿ ಚಿತ್ರೀಕರಣಕ್ಕೆ ಮತ್ತೆ ಮರಳುತ್ತಿರುವ ದರ್ಶನ್ ಅವರಿಗೆ, ಅವರ ಅಭಿಮಾನಿ ಬಳಗ ಹಾಗೂ ಇಡೀ ಚಿತ್ರರಂಗ ಕೂಡ 'ಗುಡ್ ಲಕ್' ಹೇಳಲು ತುದಿಗಾಲ್ಲಿ ನಿಂತಿದೆ. ಟಾಪ್ ನಟ ಪುನೀತ್ ಮಾತು ಚಿತ್ರರಂಗ ಹಾಗೂ ಚಿತ್ರಪ್ರೇಮಿಗಳಿಗೆ ಹೊಸ 'ಟಾನಿಕ್' ನೀಡಿದೆ ಎಂದೇ ಹೇಳಬಹುದು.

    English summary
    Power Star Punith Rajkumar told he is Happy for Darshan Release. After Darshan got Conditional Bail, Punith reacted like this. 
 
    Friday, October 7, 2011, 16:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X