twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಬಿಡುಗಡೆ ಸಂತಸ ಹಂಚಿಕೊಂಡ ಅಣ್ಣಾಬಾಂಡ್

    |

    Darshan
    ನಟ ದರ್ಶನ್ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾಗಲಿರುವ ಸುದ್ದಿ ತಿಳಿದು ಇಡೀ ಚಿತ್ರರಂಗವೇ ಸಂತೋಷ ವ್ಯಕ್ತಪಡಿಸಿದೆ. ಇದೇ ವೇಳೇ ಶೂಟಿಂಗ್ ನಡೆಸುತ್ತಿರುವ, ಪವರ್ ಸ್ಟಾರ್ ಪುನೀತ್ ಹಾಗೂ ನಿರ್ದೇಶಕ ಸೂರಿ ಸಂಗಮದ "ಅಣ್ಣಾಬಾಂಡ್" ಚಿತ್ರದ ಸೆಟ್ ನಿಂದ ಸಂತೋಷದ ಪ್ರತಿಕ್ರಿಯೆಗಳ ಸುರಿಮಳೆ ಆಗಿದೆ.

    ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ "ಎಲ್ಲಾ ಸಂಸಾರಗಳಲ್ಲೂ ಇದು ಸಹಜ. ಯಾರೂ ಬೇಕಂತಲೇ ತಪ್ಪು ಮಾಡುವುದಿಲ್ಲ. ಏನೋ ತಿಳಿಯದೇ ನಡೆದುಹೋಗುತ್ತೆ. ಎಲ್ಲವರ ಲೈಫು ಇಷ್ಟೇನೇ...! ದೇವರು ಇದ್ದಾನೆ, ಒಳ್ಳೇದು ಮಾಡ್ತಾನೆ. ಅಷ್ಟೇ ಅಲ್ಲ, ಅವರ ತಂದೆ-ತಾಯಿ, ಹಿರಿಯರು ಹಾಗೂ ಅಭಿಮಾನಿಗಳ ಆಶೀರ್ವಾದ ಅವರ ಮೇಲಿದೆ. ಎಲ್ಲಾ ಒಳ್ಳೆಯದಾಗುತ್ತೆ" ಎಂದಿದ್ದಾರೆ.

    ಪವರ್ ಸ್ಟಾರ್ ಪುನೀತ್ ಮಾತನಾಡಿ "ದರ್ಶನ್ ಬಿಡುಗಡೆ ತುಂಬಾ ಸಂತೋಷ ತಂದಿದೆ. ಆದಷ್ಟು ಬೇಗ ಕೋರ್ಟ್ ನಿಯಮ, ಔಪಚಾರಿಕತೆಯನ್ನು ಪೂರೈಸಿ ದರ್ಶನ್ ಬಿಡುಗಡೆ ಆಗಲಿ" ಎಂದಿದ್ದಾರೆ.

    ನಿರ್ದೇಶಕ ಸೂರಿ " ದರ್ಶನ್ ಬಿಡುಗಡೆ ಅವರ ಅಭಿಮಾನಿಗಳ ಜೊತೆ ನನಗೂ ಖುಷಿ ತಂದಿದೆ. ನಾನೂ ಕೂಡ ಅವರ ಹಾಗೂ ಅವರ ಸಿನಿಮಾದ ಅಭಿಮಾನಿ. ಬೇಗ ಬಿಡುಗಡೆ ಆಗಲಿ" ಎಂದು ಹಾರೈಸಿದ್ದಾರೆ.

    ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರು "ದರ್ಶನ್ ಬಿಡುಗಡೆ ನನಗೆ ತಂದಿರುವ ಸಂತಸ ವರ್ಣಿಸಲಕ್ಕೇ ಅಸಾಧ್ಯ. ನಾನು ಅವರನ್ನು ನೋಡಲಿಕ್ಕೆ ಈಗಲೇ ಹೋಗುತ್ತಿದ್ದೇನೆ. ಅದಕ್ಕಿಂತ ಸಂತೋಷದ ವಿಷಯ ನನಗೆ ಬೇರೇನೂ ಇಲ್ಲ" ಎಂದು ಸಖತ್ ಖುಷಿಖುಷಿಯಿಂದ ಹೇಳಿದ್ದಾರೆ.

    ಹೀಗೆ 'ಅಣ್ಣಾಬಾಂಡ್ ಸೆಟ್' ನಿಂದ ಸಂತೋಷದ ಸುರಿಮಳೆ ಸುರಿದಿದೆ. ದರ್ಶನ್ ಬಿಡುಗಡೆಗೆ ಸಂತೋಷ ಸಾಗರವೇ ಹರಿದಿದೆ. ಚಿತ್ರರಂಗದ ಗಣ್ಯರೆಲ್ಲ ಸಂತೋಷದೊಂದಿಗೆ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

    English summary
    After the News of Darshan Release, a number of reaction came from Annabond Movie Set. Raghavendra Rajkumar, Punith Rajkumar, Director Suri, Music Director V. Harikrishna reacted happily. They told this is all common in families. Everything goes right.
 
    Friday, October 7, 2011, 18:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X