Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಡುಬೀದಿ ನಾರಾಯಣನ ಕಂಡರೆ ತ್ರಿಷಾಗೆ ತುಂಬ ಇಷ್ಟ
ಮೋಹಕ ತಾರೆ ತ್ರಿಷಾ ಕೃಷ್ಣನ್ಗೆ ನಡುಬೀದಿ ನಾರಾಯಣ (ಬೀದಿ ನಾಯಿ) ಕಂಡರೆ ಅಪ್ಪಿ ಮುದ್ದಾಡುವಷ್ಟು ಇಷ್ಟ. ನಡುಬೀದಿ ನಾರಾಯಣ ಅಷ್ಟೇ ಅಲ್ಲ ಪ್ರಾಣಿಗಳೆಂದರೂ ಎಲ್ಲಿಲ್ಲದ ಅಕ್ಕರೆ. ಜಾಗತಿಕ ಪ್ರಾಣಿ ದಯಾ ಸಂಘದ (ಪೆಟಾ) ಕಾರ್ಯಕರ್ತೆಯೂ ಹೌದು. ಇತ್ತೀಚೆಗೆ ಆಕೆ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಿ ಎಂದು ಪೆಟಾ ಜಾಹೀರಾತಿನ ಮೂಲಕ ವಿನಂತಿಸಿಕೊಂಡಿದ್ದಾರೆ.
ಬೀದಿನಾಯಿಯೊಂದನ್ನು ಅಪ್ಪಿ ಕೊಂಡು ಮುದ್ದಾಗಿ ವಿನಂತಿಸಿಕೊಂಡಿದ್ದಾರೆ. ತ್ರಿಷಾ ದತ್ತು ತೆಗೆದುಕೊಂಡಿರುವ ಬೀದಿ ನಾಯಿಗೆ 'ಬಂಬಿ' ಎಂದು ಹೆಸರಿಡಲಾಗಿದೆ. ಈ ನಾಯಿಯನ್ನು ಶಾಲಾ ಮಕ್ಕಳು ಕಲ್ಲಿನಿಂದ ಹೊಡೆಯಲು ಮುಂದಾಗಿದ್ದರು. ಯಾರೋ ದಾರಿಹೋಕನೊಬ್ಬ ನಾರಾಯಣನಂತೆ ಬಂದು ಅದನ್ನು ಅಪಾಯದಿಂದ ಪಾರುಮಾಡಿದ್ದ.
ಹೈದರಾಬಾದಿನಲ್ಲಿ ಒಮ್ಮೆ ಕಾರಿನಲ್ಲಿ ಹೋಗಬೇಕಾದರೆ, ನಾಯಿ ಮರಿಯೊಂದು ಅನಾಥವಾಗಿ ಮಳೆಯಲ್ಲಿ ನೆನೆಯುತ್ತಿತ್ತು. ಅದರ ಕಾಲಿಗೆ ಗಾಯವಾಗಿ ಮಳೆಯಲ್ಲಿ ನೆನೆಯುತ್ತಾ ನರಳುತ್ತಿತ್ತು. ಅದಕ್ಕೆ ಕ್ಯಾಡ್ಬರಿ ಎಂದು ಹೆಸರಿಟ್ಟಿದ್ದೇನೆ. ಈಗವನು ನನಗೆ ಮಗ ಇದ್ದಂತೆ. ಈ ರೀತಿಯ ಮಗನನ್ನು ನಾನು ಯಾವತ್ತೂ ಕಂಡಿಲ್ಲ ಎನ್ನುತ್ತಾರೆ ತ್ರಿಷಾ. (ಏಜೆನ್ಸೀಸ್)