ಹರಿಕೃಷ್ಣ, ರವಿವರ್ಮ ಹಾಗೂ ಬಾಬು ತ್ರಿವೇಣಿ ಸಂಗಮ
'ಗುಬ್ಬಿ' ರವಿವರ್ಮ ನಿರ್ದೇಶನದ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಹರಿಕೃಷ್ಣ ಫೈನಲ್ ಆಗಿದ್ದಾರೆ. ಅಜಯ್ರಾವ್ ನಾಯಕನಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ಎಸ್.ವಿ.ಬಾಬು ನಿರ್ಮಾಪಕರು. ಈ ಹಿಂದೆ ಇದೇ ರವಿವರ್ಮ ಮತ್ತು ಬಾಬು ತಂಡ 'ಸಂಗಮ' ಸಿನಿಮಾ ಮಾಡಿತ್ತು. ಅದು ಐವತ್ತು ದಿನವನ್ನು ಯಶಸ್ವಿಯಾಗಿ ಪೂರೈಸಿತ್ತು.
ಆದರೆ, ಅದೇ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದ ದೇವಿಶ್ರೀ ಪ್ರಸಾದ್ ಸಂಗೀತ ಅದ್ಯಾಕೋ ಕನ್ನಡಿಗರಿಗೆ ಇಷ್ಟವಾಗಿರಲಿಲ್ಲ. ದೇವಿಶ್ರೀ ತೆಲುಗಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕರಾಗಿದ್ದರೂ 'ಆರ್ಯ'ದಂಥ ಹಿಟ್ಟಾನುಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ನಮ್ಮಲ್ಲಿನ ಜನ ಅದ್ಯಾಕೋ ಅವರ ಢಂಕಣಕ ಹಾಡುಗಳನ್ನು ಇಷ್ಟಪಡಲಿಲ್ಲ.
ಈ ಬಾರಿ ದೇವಿಶ್ರೀ ಪ್ರಸಾದ್ ಅವರನ್ನು ಕೈ ಬಿಟ್ಟು, ಸದ್ಯದ ಕನ್ನಡದ ನಂಬರ್ ಒನ್ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಜೊತೆ ರವಿವರ್ಮ ಕೈ ಜೋಡಿಸಿದ್ದಾರೆ. ಅಂದಹಾಗೇ ಎಸ್.ವಿ.ಬಾಬು ಅವರು ಶಿವಮಣಿಯವರ 'ಗೋಕಾಕ್' ಸಿನಿಮಾದಿಂದ ಹೊರಬಂದು, ಮತ್ತೆ ರವಿವರ್ಮರಿಗೆ ಆಫರ್ ಕೊಟ್ಟಿದ್ದಾರೆ!ಈ ಬಾರಿಯೂ ಈ ಜೋಡಿ ಗೆಲ್ಲುತ್ತಾ? ಅಜಯ್ರಾವ್ಗೆ ಬ್ರೇಕ್ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ...


Click it and Unblock the Notifications











