twitter
    For Quick Alerts
    ALLOW NOTIFICATIONS  
    For Daily Alerts

    ಆರತಿ ಎತ್ತಿ ಮನೆಗೆ ಬರಮಾಡಿಕೊಳ್ಳುತ್ತೇನೆ, ವಿಜಯಲಕ್ಷ್ಮಿ

    By Rajendra
    |

    Darshan wife Vijayalakshmi
    ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ದೊರೆಯುತ್ತಿದ್ದಂತೆ ಅವರ ಪತ್ನಿ ವಿಜಯಲಕ್ಷ್ಮಿ ತೀವ್ರ ಸಂತಸ ವ್ಯಕ್ತಪಡಿಸಿದರು. ಶುಕ್ರವಾರ (ಅ.7) ಅವರು ಹೈಕೋರ್ಟ್‍ ಆವರಣದಲ್ಲಿ ಕಾಯುತ್ತಾ ಕಾರಿನಲ್ಲೇ ಕುಳಿತಿದ್ದರು. ತನ್ನ ಪತಿಗೆ ಜಾಮೀನು ಮಂಜೂರಾಗುತ್ತಿದ್ದಂತೆ ಅವರ ಆತಂಕ ಆನಂದಬಾಷ್ಪಗಳಾಗಿ ಬದಲಾಯಿತು. ವಿಜಯಲಕ್ಷ್ಮಿ ಅವರು ವ್ಯಕ್ತಪಡಿಸಿದ ಸಂತಸದ ಮಾತುಗಳನ್ನು ಅವರ ಮಾತುಗಳಲ್ಲೇ ಕೇಳಿರಿ.

    ಐ ಯಾಮ್ ವೆರಿ ಹ್ಯಾಪಿ. ತುಂಬಾ ಖುಷಿಯಾಗಿದೆ. ಇನ್ನೂ ನಮ್ಮ ಬಾಂಡೇಜ್ ಗಟ್ಟಿಯಾಗಿದೆ. ಕಾರಿನಲ್ಲೇ ಕುಳಿತು ಜಾಮೀನಿಗಾಗಿ ನಿರೀಕ್ಷಿಸುತ್ತಿದ್ದೆ. ರಿಸಲ್ಟ್‌ ಏನಾಗುತ್ತದೋ ಎಂಬ ಆತಂಕದಲ್ಲಿದ್ದೆ. ದರ್ಶನ್‌ರನ್ನು ಇನ್ನೂ ಭೇಟಿಯಾಗಿಲ್ಲ. ಸಂಜೆಗೆ ನಾನು ಡೈರೆಕ್ಟಾಗಿ ಮಾತನಾಡಲು ಇಷ್ಟಪಡುತ್ತೇನೆ. ಟೆನ್ಷನ್ ಇದ್ದ ಕಾರಣ ಕಾರಿನಲ್ಲೇ ಕುಳಿತು ವೇಟ್ ಮಾಡುತ್ತಿದ್ದೆ.

    ಅವರು ಬಿಡುಗಡೆಯಾಗುತ್ತಿದ್ದಂತೆ ಅವರನ್ನು ಆರತಿ ಮಾಡಿ ಮನೆಗೆ ಬರಮಾಡಿಕೊಳ್ಳುತ್ತೇನೆ. ನಾವು ಆದರ್ಶ ದಂಪತಿಗಳಾಗಿ ತೋರಿಸುತ್ತೀವಿ ಎಂದಿದ್ದಾರೆ. ನಟ ದರ್ಶನ್‌ರನ್ನು ವಿಜಯಲಕ್ಷ್ಮಿ ಜೈಲಿನಲ್ಲಿ ಒಮ್ಮೆ ಭೇಟಿಯಾಗಿದ್ದರು. ಆಗ ತನ್ನ ಮಗ ವಿನೀಶ್‌ರನ್ನು ನೋಡಿ ದರ್ಶನ್ ಕಣ್ಣೀರಾಗಿದ್ದರಂತೆ. ಮಗನನ್ನು ಎತ್ತಿ ಮುದ್ದಾಡಿದ್ದರು. ಜೈಲಿನಲ್ಲಿ ದರ್ಶನ್ ಅವರ ನಡವಳಿಕೆ ಸಾಕಷ್ಟು ಬದಲಾಗಿತ್ತು. (ಒನ್‌ಇಂಡಿಯಾ ಕನ್ನಡ)

    English summary
    Actor Darshan's wife Vijayalakshmi expressed her happiness over Karnataka High Court grants conditional bail to his hubby. She is eager to receive her husband to offer special aarathi for him.
    Friday, October 7, 2011, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X