ಇಳಯರಾಜ ಭಕ್ತಿ ಭಾವ : ಮುಕಾಂಬಿಕೆಗೆ ವಜ್ರದ ಕಿರೀಟ

By Staff


ದೇವಿಯಿಲ್ಲದೆ ನಾನಿಲ್ಲ... ಸಂಗೀತವೂ ಇಲ್ಲ... ಎಲ್ಲವೂ ಆಕೆಯ ಕೃಪೆ -ಇಳಯರಾಜ

ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಇಳಯರಾಜ, 30ಲಕ್ಷರೂ. ಮೌಲ್ಯದ ವಜ್ರದ ಕಿರೀಟವನ್ನು ಭಕ್ತಿ ಶ್ರದ್ಧೆಗಳಿಂದ ಸಮರ್ಪಿಸಿದರು.

ದೇವಸ್ಥಾನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವಿಯಿಂದ ಯಾವುದೇ ವರ ಪಡೆಯುವ ಪ್ರತಿಫಲಾಪೇಕ್ಷೆಯಿಂದ ಕಿರೀಟ ಸಮರ್ಪಿಸುತ್ತಿಲ್ಲ. ದೇವಿಯ ಪ್ರೇರಣೆಯಂತೆ ಅರ್ಪಿಸುತ್ತಿದ್ದೇನೆ ಎಂದರು.

ಮೂಕಾಂಬಿಕೆಯ ದಯೆಯಿಂದಲೇ ನಾನಿಂದು ಸಂಗೀತಗಾರನಾಗಿದ್ದೇನೆ. ಇದು ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಪ್ರಯತ್ನ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಇಳಯರಾಜರ ಪತ್ನಿ ಜೀವಾ, ಪುತ್ರಿ ಭವತಾರಿಣಿ, ಕೊಲ್ಲೂರು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್‌.ಕಾಳೆ, ಶಾಸಕ ಗೋಪಾಲ ಪೂಜಾರಿ ಮತ್ತಿತರರು ಹಾಜರಿದ್ದರು.

ದೇವಿ ಮತ್ತು ಇಳಯರಾಜ ನಂಟು : ಇತ್ತೀಚೆಗಷ್ಟೇ ತಮ್ಮ ಪುತ್ರಿ ಭವತಾರಿಣಿಯ ವಿವಾಹವನ್ನು ಕೊಲ್ಲೂರು ಶ್ರೀಕ್ಷೇತ್ರದಲ್ಲಿಯೇ ನೆರವೇರಿಸಿರುವ ಇಳಯರಾಜ, ದೇವಿಯ ಪರಮ ಭಕ್ತರು. ಈ ಹಿಂದೆ ದೇವಿಗೆ 30ಲಕ್ಷರೂ. ಮೌಲ್ಯದ ವಜ್ರದ ಹಸ್ತಗಳನ್ನು ಅರ್ಪಿಸಿದ್ದರು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X