Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆ.ಜಿ.ರಸ್ತೇಲಿ ಸೋಮವಾರ ರಾಜ್, ವಿಷ್ಣು, ಅಂಬಿ, ಉಪ್ಪಿ , ಸುದೀಪ್
ಹೃದಯಬೇನೆಯಿಂದ
ಈಗಷ್ಟೇ
ಚೇತರಿಸಿಕೊಂಡು
ಸದಾಶಿವನಗರದ
ಬಂಗಲೆಯಲ್ಲಿ
ಮೊಮ್ಮಕ್ಕಳೊಂದಿಗೆ
ಆಟದಲ್ಲಿ
ಮುಳುಗಿರುವ
ವರನಟ
ಡಾ.ರಾಜ್ಕುಮಾರ್
ಮತ್ತೆ
ಹೋರಾಟ
ಎಂದು
ಬೀದಿಗಿಳಿಯಲಿದ್ದಾರೆಯೆ
?
ಹೌದು
!
ಹಾಗೆನ್ನುತ್ತಿದೆ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ . ಚಿತ್ರೋದ್ಯಮದ ನಾನಾ ಸಮಸ್ಯೆಗಳತ್ತ ಸರ್ಕಾರದ ಗಮನವನ್ನು ಸೆಳೆಯಲು ನಿರ್ಮಾಪಕರ ಸಂಘ ಆಗಸ್ಟ್ 9ರ ಸೋಮವಾರ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು , ಈ ಕಾರ್ಯಕ್ರಮದಲ್ಲಿ ರಾಜ್ ಸೇರಿದಂತೆ ಕನ್ನಡ ಚಿತ್ರೋದ್ಯಮದ ಸಮಸ್ತ ಪ್ರಮುಖರೂ ಭಾಗವಹಿಸುವುದಾಗಿ ಸಂಘ ಹೇಳಿಕೊಂಡಿದೆ.
'ಕನ್ನಡ ಚಿತ್ರರಂಗದ ಉಳಿವಿಗಾಗಿ ಭಾರೀ ಪ್ರತಿಭಟನೆ" ಎಂದು ಪ್ರತಿಭಟನಾ ಕಾರ್ಯಕ್ರಮವನ್ನು ನಿರ್ಮಾಪಕರ ಸಂಘ ಬಣ್ಣಿಸಿದೆ. ಈ ಪ್ರತಿಭಟನೆಯಲ್ಲಿ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಾರ್ಮಿಕರು, ಕಿರುತೆರೆ ಕಲಾವಿದರು ಮಾತ್ರವಲ್ಲದೆ- ಸಾಂಸ್ಕೃತಿಕ ಲೋಕದ ಪ್ರಮುಖರು ಹಾಗೂ ಕನ್ನಡಪರ ಸಂಘಟನೆಗಳ ನಾಯಕರು ಭಾಗವಹಿಸುವರು ಎಂದಿರುವ ಸಂಘ- ಕನ್ನಡ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆನೀಡಿದೆ.
ನಿರ್ಮಾಪಕರ ಸಂಘದ ಮಾತನ್ನು ನಂಬುವುದಾದರೆ- ಆ.9ರ ಸೋಮವಾರ ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ರಸ್ತೆಯ ಚೌಕದಲ್ಲಿ ವರನಟ ರಾಜ್, ವಿಷ್ಣು , ಅಂಬರೀಷ್, ಶಿವಣ್ಣ , ಉಪೇಂದ್ರ, ಪುನೀತ್, ರವಿಚಂದ್ರನ್, ಜಗ್ಗೇಶ್, ಸುದೀಪ್ ಮುಂತಾದ ತಾರಾಗಣ ಸೇರುವುದು ಖಚಿತ. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ ದೇವರುಗಳೂ ಸೇರಲಿದ್ದಾರೆ.
ಸರ್ಕಾರ ಕಣ್ತೆರೆದೀತೆ ?
ಚಿತ್ರರಂಗದ ಚಟುವಟಿಕೆ ಸ್ಥಗಿತ : ಆ.9ರಂದು ಪ್ರತಿಭಟನೆ ಮಾತ್ರವಲ್ಲ , ಕನ್ನಡ ಚಿತ್ರೋದ್ಯಮದ ಸಮಸ್ತ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸುವುದಾಗಿಯೂ ನಿರ್ಮಾಪಕರ ಸಂಘ ಹೇಳಿದೆ.
ಚಿತ್ರೋದ್ಯಮದ ಸಮಸ್ಯೆಗಳ ಪರಿಹಾರಕ್ಕಾಗಿ ಸಮಿತಿಯಾಂದನ್ನು ರಚಿಸುವುದಾಗಿ ಸರ್ಕಾರ ಹೇಳಿರುವ ಬೆನ್ನಿನಲ್ಲೇ ಈ ಪ್ರತಿಭಟನೆ ಕಾರ್ಯಕ್ರಮ ಏರ್ಪಾಟಾಗಿದೆ.
ಸಬ್ಸಿಡಿ, ರಿಮೇಕ್ ನೀತಿ ನಿಲುವು, ಪರಭಾಷಾ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ಸೇರಿದಂತೆ ಸರ್ಕಾರದ ಹಲವು ನೀತಿಗಳ ಕುರಿತು ನಿರ್ಮಾಪಕರ ಸಂಘ ಆಕ್ಷೇಪ ಎತ್ತಿದೆ.
ಉಳಿದ ಚಿತ್ರಗಳು ಸೋಮವಾರದ ನಂತರ