twitter
    For Quick Alerts
    ALLOW NOTIFICATIONS  
    For Daily Alerts

    ನಟ ದರ್ಶನ್ ಈಗ ಅಭಿಮಾನಿಗಳ ಪಾಲಿಗೆ ಅಣ್ಣ

    By * ಜಯತೀರ್ಥ, ಬೆಂಗಳೂರು
    |

    Actor Darshan
    ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಮತ್ತೊಬ್ಬ 'ಅಣ್ಣ' ಸಿಕ್ಕಿದ್ದಾರೆ! ಹೌದು ದರ್ಶನ್ ಈಗ ಅಣ್ಣನಾಗಿ ಬದಲಾಗಿದ್ದಾರೆ. ಈ ಗೌರವವನ್ನು ಪ್ರಸಾದಿಸಿರುವವರು ಅವರ ಅಭಿಮಾನಿಗಳು. ದರ್ಶನ್ ಜೈಲಿಗೆ ಹೋಗಿ ಬಂದದ್ದೇ ತಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ!

    ಸದ್ಯಕ್ಕೆ ಕನ್ನಡ ಚಿತ್ರೋದ್ಯಮದಲ್ಲಿ ಏನೇ ವಿವಾದ, ಜಗಳಗಳು ಉದ್ಭವಿಸಿದರೂ ಮುಂದೆ ನಿಂತು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗುತ್ತಿರುವವರು ರೆಬೆಲ್ ಸ್ಟಾರ್ ಅಂಬರೀಷ್. ಸಮಸ್ಯೆಗಳು ದೊಡ್ಡದೇ ಇರಲಿ ಚಿಕ್ಕದೇ ಇರಲಿ ಅಂಬರೀಷ್ ಹೇಳಿದರೆಂದರೆ ಮರು ಮಾತನಾಡುವಂತಿಲ್ಲ.

    ಆದರೆ ಇದೇ ಅಂಬರೀಷ್ ಅವರು ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಸಮಸ್ಯೆ ಬಿಡಿಸಲು ಹೋಗಿ ವಿಫಲರಾಗಿದ್ದರು. ಅಂಬಿ ಮಾತಿಗೆ ಬೆಲೆ ಕೊಡದ ದರ್ಶನ್ "ನೀನ್ಯಾವ ದೊಡ್ಡ ಮನುಷ್ಯ ಅಂಥ ಬಂದ್ಬಿಟ್ಟೆ ಹೋಗಯ್ಯ" ಎಂದಿದ್ದರಂತೆ. ಈ ಮಾತಿಗೆ ಕುಪಿತರಾಗಿದ್ದ ಅಂಬಿ, ಹೋಗಮ್ಮ ಪೊಲೀಸರಿಗೆ ಕಂಪ್ಲೇಂಟ್ ಕೊಡೋಗು ಎಂದು ವಿಜಯಲಕ್ಷ್ಮಿಗೆ ಹೇಳಿದ್ದರು. ಬಳಿಕ ಪರಿಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

    ಶುಕ್ರವಾರ (ಅ.7) ದರ್ಶನ್ ಬಿಡುಗಡೆಯಾಗುತ್ತಿದ್ದಂತೆ ಅವರಅಭಿಮಾನಿಗಳ ಬಾಯಿಂದ ದರ್ಶನ್ 'ಅಣ್ಣ' ಎಂಬ ಮಾತುಗಳು ಕೇಳಿಬಂದಿವೆ. ಅಣ್ಣನಿಗೆ ಜಯವಾಗಲಿ ಎಂಬ ಮಾತುಗಳು ಕೇಳಿಬಂದಿವೆ. ಜೈಲಿಗೆ ಹೋಗಿ ಬಂದದ್ದೇ ತಡ ದರ್ಶನ್‌ರನ್ನು 'ಅಣ್ಣ' ಎಂದು ಕರೆಯುತ್ತಿರುವುದು ಅಷ್ಟು ಸರಿಯಾದ ಕ್ರಮವಲ್ಲ. ಅಭಿಮಾನಿಗಳು ಕೊಂಚ ವಿವೇಚನೆಯಿಂದ ವ್ಯವಹಿಸಬೇಕಾಗುತ್ತದೆ.

    English summary
    Kannada actor Darsahn now becomes 'Anna' for Kannada films after he release from Parappana Agrahara central jail. Soon after he release from the jail fans called him as Anna.
    Saturday, October 8, 2011, 13:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X