Don't Miss!
- Automobiles Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಲ್ಲಿದೆ ನಮ್ಮನೆ ಬಾಲಿವುಡ್ ಸುಮ್ಮನೆ ಎಂದ ಸುದೀಪ್
ಕನ್ನಡದ ನಟ ಕಿಚ್ಚ ಸುದೀಪ್ ಬಾಲಿವುಡ್ ಕಡೆಗೆ ಯಾಕೆ ಮತ್ತೆ ಹೋಗಲಿಲ್ಲ ಎಂಬ ಪ್ರಶ್ನೆ ಸಾಕಷ್ಟು ಜನರಿಗೆ ಕಾಡಿರಲಿಕ್ಕೆ ಸಾಕು. ಏಕೆಂದರೆ 'ಪೂಂಕ್' ಮತ್ತು 'ರಣ್' ಬಾಲಿವುಡ್ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ಬಾಲಿವುಡ್ ನಲ್ಲೇ ಸೆಟ್ಲ ಆಗಬಹುದೆಂದು ಬಹುತೇಕರು ಅಂದುಕೊಂಡಿದ್ದು ಸುಳ್ಳಲ್ಲ.
ಈ ಬಗ್ಗೆ ಕೇಳಿದಾಗ, ಸುದೀಪ್ ಉತ್ತರ "ನನಗೆ ಬಾಲಿವುಡ್ ನಲ್ಲಿ ಮತ್ತೆ ಅವಕಾಶಗಳು ಬಂದಿದ್ದು ನಿಜ. ಆದರೆ ಸ್ಯಾಂಡಲ್ ವುಡ್ ಬಿಟ್ಟು ಹೋಗುವುದಕ್ಕೆ ಮನಸ್ಸಾಗಲಿಲ್ಲ. ಬಾಲಿವುಡ್ ಗೆ ಒಮ್ಮೆ ಹೋಗಿ ಬಂದರೆ ಬರೋಬ್ಬರಿ ಅರ್ಧ ವರ್ಷಕ್ಕಿಂತ ಹೆಚ್ಚು ಕಾಲ ಮುಗಿದು ಹೋಗುತ್ತೆ. ಆಗ ಇಲ್ಲಿಂದ ದೂರವಾದ ಭಾವ ಕಾಡುತ್ತೆ. ಹಾಗಾಗಿ ಇಲ್ಲೇ ಇದ್ದೇನೆ".
ಸದ್ಯಕ್ಕೆ ತೆಲುಗಿನ 'ಈಗ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್, ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ವರದನಾಯಕ, ಕಿಕ್, ಹರ್ಷ ನಿರ್ದೇಶನ ಚಿತ್ರ, ಹಾಗೂ 'ವಿಷ್ಣುವರ್ಧನ್' ಚಿತ್ರದ ನಿರ್ದೇಶಕ ಕುಮಾರ್ ಜೊತೆ ಸುದೀಪ್ ಮುಂದಿನ ಚಿತ್ರಗಳಿವೆ. "ಇಲ್ಲಿದೆ ನಮ್ಮನೆ, ಅಲ್ಲಿ ಹೋದೆ ಸುಮ್ಮನೆ" ಸುದೀಪ್ ಪಾಲಸಿ. (ಒನ್ ಇಂಡಿಯಾ ಕನ್ನಡ)