twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು!

    |

    Darshan-Family
    ನಿನ್ನೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾದ ನಟ ದರ್ಶನ್ ನೋಡಲು ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಪ್ರಮುಖರು ದರ್ಶನ್ ಮನೆಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಿನ್ನೆ ಜೈಲಿನಿಂದ ಬಿಡುಗಡೆಗೊಂಡ ದರ್ಶನ್ ನೇರವಾಗಿ ಅವರ ನಿವಾಸದ ಹತ್ತಿ ಇರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.

    ನಂತರ ಮನೆಗೆ ತೆರಳಿದ ದರ್ಶನ್ ತಮ್ಮನ್ನು ನೋಡಲು ನೆರದಿರುವ ಅಭಿಮಾನಿಗಳನ್ನು ಕಂಡು ಮೂಕವಿಸ್ಮಿತರಾದರು. ಆಗಲೇ ಪೊಲೀಸರಿಂದ ಲಾಠಿ ಏಟು ತಿಂದಿದ್ದರೂ ಅಭಿಮಾನಿಗಳು ಕದಲದೇ ನಿಂತಿದ್ದರು. ಪತ್ನಿ ವಿಜಯಲಕ್ಷ್ಮಿ ಜೊತೆ ಮನೆಯ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳ ದರ್ಶನ್ 'ದರ್ಶನ' ನೀಡಿದರು. ಹೂವು, ಹಾರಗಳನ್ನು ದರ್ಶನ್ ಕಡೆ ಎಸೆದು ಸಂಭ್ರಮಿಸುವ ದೃಶ್ಯ ಅಲ್ಲಿ ಮನೆಮಾಡಿತ್ತು.

    ದರ್ಶನ್ ದಂಪತಿಗಳು ಅಭಿಮಾನಿಗಳನ್ನು ನಿರಾಸೆಗೊಳಿಸದೇ ಎದುರಿನಲ್ಲಿ ಸಿಕ್ಕಷ್ಟು ಜನರಿಗೆ ಹಸ್ತಲಾಘವ ಮಾಡಿ ಮತ್ತೆ 'ದರ್ಶನ' ಕೊಡುವುದಾಗಿ ಹೇಳಿ ಬಾಲ್ಕಿನಿಯಿಂದ ಮನೆಯೊಳಗೆ ಸೇರಿ ಮರೆಯಾದರು. ಅಭಿಮಾನಿಗಳು ಮತ್ತೆ ಬಂದೇ ಬರುತ್ತೇವೆ ಎಂದು ಕೂಗುತ್ತಾ ಹೋಗುತ್ತಿದ್ದುದು ಎಲ್ಲೆಡೆ ಕೇಳಿ ಬರುತ್ತಿತ್ತು. ದಂಪತಿಗಳು ಅಭಿಮಾನಿಗಳ ಎದುರಿಗೇ ಪರಸ್ಪರ ಸಿಹಿ ಹಂಚಿಕೊಂಡಿದ್ದು ವಿಶೇಷವಾಗಿತ್ತು. (ಒನ್ ಇಂಡಿಯಾ ಕನ್ನಡ)

    English summary
    Challenging Star Darshan is released and went to the temple Rajarajeshwari, near his house. Then he appeared in front of his fans. 
 
    Saturday, October 8, 2011, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X