ಭಾವುಕರಾಗಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ದರ್ಶನ್

Darshan
ದರ್ಶನ್ ಮನೆಮುಂದೆ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಸೇರಿದ್ದಾರೆ. ಅಭಿಮಾನಿಗಳ ಮುಂದೆ ಬಂದ ದರ್ಶನ್ ಕೈ ಎತ್ತಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ್ದು " ನಾನು ಇಡೀ ಕರ್ನಾಟಕದ ಹಾಗೂ ಎಲ್ಲಾ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಪತ್ನಿಯನ್ನು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಪತ್ನಿಯಿಂದಾಗಿಯೇ ನಾನು ಚೆನ್ನಾಗಿದ್ದೇನೆ. ಅಭಿಮಾನಿಗಳಿಲ್ಲದೇ ನಾನಿಲ್ಲ. ಅಭಿಮಾನಿಗಳಿಂದಲೇ ನಾನು ಬದುಕಿರೋದು".

ಹೀಗೆ ಹೇಳಿ ಅಭಿಮಾನಿಗಳ ಕಡೆ ಕೈ ಎತ್ತಿ ಕ್ಷಮೆ ಯಾಚಿಸಿದ ನಟ ದರ್ಶನ್ ಭಾವುಕರಾದರು. ಈ ವೇಳೆ ಸೇರಿದ್ದ ಅಭಿಮಾನಿಗಳು ದರ್ಶನ್ ಅವರಿಗೆ ಹೂವಿನ ಹಾರ, ಹೂವು ಹಾಗೂ ಕೇಕ್ ಗಳನ್ನು ನೀಡಿದರು. ಬೇಸರಿಸಿಕೊಳ್ಳದೇ ಅಭಿಮಾನಿಗಳನ್ನು ಚೆನ್ನಾಗಿ ನೋಡಿಕೊಂಡ ದರ್ಶನ್ ಎಲ್ಲ ಅಭಿಮಾನಿಗಳನ್ನೂ ಮುಟ್ಟಿ ಮುಟ್ಟಿ ಮಾತನಾಡಿಸುತ್ತಿದ್ದುದು ಕಂಡು ಬರುತ್ತಿತ್ತು. ಅಭಿಮಾನಿಗಳೂ ಅಷ್ಟೇ ದರ್ಶನರನ್ನು ನೋಡಿ ಭಾವುಕರಾಗಿ ದರ್ಶನ್ ಸುತ್ತುವರಿದು ಹಸ್ತಲಾಘವ ಮಾಡಿದರು.

ಅಭಿಮಾನಿಗಳು ದರ್ಶನ್ ನೋಡಲು ಮನೆಯ ಕಂಪೌಂಡ್, ಮರಗಳ ಮೇಲೆಲ್ಲಾ ಹತ್ತಿ ಕೊನೆಗೂ ದರ್ಶನ ಪಡೆದ ಸಂತೋಷದಲ್ಲಿ ತೇಲಾಡುತ್ತಿದ್ದರು. ಇದೇ ವೇಳೇ ಅಲ್ಲಿ ಕಿರುತೆರೆ ಹಾಗೂ ಚಿತ್ರರಂಗದ ಹಲವಾರು ಪ್ರಮುಖರು ದರ್ಶನ್ ರನ್ನು ಭೇಟಿಯಾಗಿ ಸಂತೋಷ ವ್ಯಕ್ತಪಡಿಸಿದರು. ಅವಿನಾಶ್-ಮಾಳವಿಕಾ ದಂಪತಿ, ಬುಲೆಟ್ ಪ್ರಕಾಶ್ ಹಾಗೂ ಇನ್ನಿತರರು ಭೇಟಿಯಾದ ಪ್ರಮುಖರು.

ಈ ವೇಳೆ ಸೇರಿದ್ದ ಅಭಿಮಾನಿಗಳ ನೂಕು-ನುಗ್ಗಲಿನಿಂದಾಗಿ ದರ್ಶನ್ ಮೆನೆಯ ಕಂಪೌಂಡ್ ಕುಸಿದು ಮೂವರಿಗೆ ಗಾಯಗಳಾಗಿವೆ. ಕಂಪೌಂಡ್ ಕುಸಿದಿದ್ದಕ್ಕೆ ಬೇಸರಿಸಿಕೊಳ್ಳದ ದರ್ಶನ್ ಗಾಯಗೊಂಡವರಿಗೆ ಸಾಂತ್ವನ ಹೇಳಲು ಮರೆಯಲಿಲ್ಲ.

More from Filmibeat

English summary
Challenging Star Darshan Regrates in front of his fans near his house. Number of Fans crowed near his today. He Regrates that I am fine from my wife and i will look after her in future. I am living from my fans only. I Regrate in all Karnataka people.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X