twitter
    For Quick Alerts
    ALLOW NOTIFICATIONS  
    For Daily Alerts

    ಭಾವುಕರಾಗಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ದರ್ಶನ್

    |

    Darshan
    ದರ್ಶನ್ ಮನೆಮುಂದೆ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಸೇರಿದ್ದಾರೆ. ಅಭಿಮಾನಿಗಳ ಮುಂದೆ ಬಂದ ದರ್ಶನ್ ಕೈ ಎತ್ತಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ್ದು " ನಾನು ಇಡೀ ಕರ್ನಾಟಕದ ಹಾಗೂ ಎಲ್ಲಾ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಪತ್ನಿಯನ್ನು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಪತ್ನಿಯಿಂದಾಗಿಯೇ ನಾನು ಚೆನ್ನಾಗಿದ್ದೇನೆ. ಅಭಿಮಾನಿಗಳಿಲ್ಲದೇ ನಾನಿಲ್ಲ. ಅಭಿಮಾನಿಗಳಿಂದಲೇ ನಾನು ಬದುಕಿರೋದು".

    ಹೀಗೆ ಹೇಳಿ ಅಭಿಮಾನಿಗಳ ಕಡೆ ಕೈ ಎತ್ತಿ ಕ್ಷಮೆ ಯಾಚಿಸಿದ ನಟ ದರ್ಶನ್ ಭಾವುಕರಾದರು. ಈ ವೇಳೆ ಸೇರಿದ್ದ ಅಭಿಮಾನಿಗಳು ದರ್ಶನ್ ಅವರಿಗೆ ಹೂವಿನ ಹಾರ, ಹೂವು ಹಾಗೂ ಕೇಕ್ ಗಳನ್ನು ನೀಡಿದರು. ಬೇಸರಿಸಿಕೊಳ್ಳದೇ ಅಭಿಮಾನಿಗಳನ್ನು ಚೆನ್ನಾಗಿ ನೋಡಿಕೊಂಡ ದರ್ಶನ್ ಎಲ್ಲ ಅಭಿಮಾನಿಗಳನ್ನೂ ಮುಟ್ಟಿ ಮುಟ್ಟಿ ಮಾತನಾಡಿಸುತ್ತಿದ್ದುದು ಕಂಡು ಬರುತ್ತಿತ್ತು. ಅಭಿಮಾನಿಗಳೂ ಅಷ್ಟೇ ದರ್ಶನರನ್ನು ನೋಡಿ ಭಾವುಕರಾಗಿ ದರ್ಶನ್ ಸುತ್ತುವರಿದು ಹಸ್ತಲಾಘವ ಮಾಡಿದರು.

    ಅಭಿಮಾನಿಗಳು ದರ್ಶನ್ ನೋಡಲು ಮನೆಯ ಕಂಪೌಂಡ್, ಮರಗಳ ಮೇಲೆಲ್ಲಾ ಹತ್ತಿ ಕೊನೆಗೂ ದರ್ಶನ ಪಡೆದ ಸಂತೋಷದಲ್ಲಿ ತೇಲಾಡುತ್ತಿದ್ದರು. ಇದೇ ವೇಳೇ ಅಲ್ಲಿ ಕಿರುತೆರೆ ಹಾಗೂ ಚಿತ್ರರಂಗದ ಹಲವಾರು ಪ್ರಮುಖರು ದರ್ಶನ್ ರನ್ನು ಭೇಟಿಯಾಗಿ ಸಂತೋಷ ವ್ಯಕ್ತಪಡಿಸಿದರು. ಅವಿನಾಶ್-ಮಾಳವಿಕಾ ದಂಪತಿ, ಬುಲೆಟ್ ಪ್ರಕಾಶ್ ಹಾಗೂ ಇನ್ನಿತರರು ಭೇಟಿಯಾದ ಪ್ರಮುಖರು.

    ಈ ವೇಳೆ ಸೇರಿದ್ದ ಅಭಿಮಾನಿಗಳ ನೂಕು-ನುಗ್ಗಲಿನಿಂದಾಗಿ ದರ್ಶನ್ ಮೆನೆಯ ಕಂಪೌಂಡ್ ಕುಸಿದು ಮೂವರಿಗೆ ಗಾಯಗಳಾಗಿವೆ. ಕಂಪೌಂಡ್ ಕುಸಿದಿದ್ದಕ್ಕೆ ಬೇಸರಿಸಿಕೊಳ್ಳದ ದರ್ಶನ್ ಗಾಯಗೊಂಡವರಿಗೆ ಸಾಂತ್ವನ ಹೇಳಲು ಮರೆಯಲಿಲ್ಲ.

    English summary
    Challenging Star Darshan Regrates in front of his fans near his house. Number of Fans crowed near his today. He Regrates that I am fine from my wife and i will look after her in future. I am living from my fans only. I Regrate in all Karnataka people.
 
    Saturday, October 8, 2011, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X