twitter
    For Quick Alerts
    ALLOW NOTIFICATIONS  
    For Daily Alerts

    ಪಾಪರಾಗುವ ಅಪಾಯದಿಂದ ಪಾರಾದ ಜಯಪ್ರದಾ

    By Staff
    |

    ಚೆನ್ನೈ, ಮಾ.08 : ಮೋಹಕ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಪ್ರದಾ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಚೆನ್ನೈ ಮಹಾನಗರ ಪಾಲಿಕೆ ಮತ್ತು ಖಾಸಗಿ ಬಂಡವಾಳದಾರರಿಗೆ ನೀಡಬೇಕಾದ 25,20,000 ರು.ಗಳನ್ನು ಒಂದೇ ಕಂತಿನಲ್ಲಿ ನೀಡಿ ದಿವಾಳಿತನದಿಂದ ಪಾರಾಗಿದ್ದಾರೆ.

    ಜಯಪ್ರದಾ ಥಿಯೇಟರ್ ಮತ್ತು ರಾಜ್ ಥಿಯೇಟರ್ ಪಾಲುದಾರರಾಗಿರುವ ಜಯಪ್ರದಾ ತಮ್ಮ ವಕೀಲರ ಮುಖಾಂತರ ಎಲ್ಲ ಹಣವನ್ನು ಪಾವತಿಸಿದ್ದರಿಂದ ಮದ್ರಾಸ್ ಹೈಕೋರ್ಟ್ ಜಯಪ್ರದಾ ದಿವಾಳಿಯಾಗಿದ್ದಾರೆಂದು ಈ ಮೊದಲು ಹೊರಡಿಸಿದ ಆದೇಶವನ್ನು ಹೊಡೆದುಹಾಕಿದ್ದಾರೆ. ಸೆಪ್ಟೆಂಬರ್ 2006ರಲ್ಲಿ ಹೊರಡಿಸಿದ್ದ ಆದೇಶವನ್ನು ತಳ್ಳಿಹಾಕಲು ಜಯಪ್ರದಾ ಸಲ್ಲಿಸಿದ್ದ ಅರ್ಜಿ 503 ದಿನಗಳ ವಿಳಂಬಕಾಲವನ್ನೂ ಹೈಕೋರ್ಟ್ ನ್ಯಾಯಮೂರ್ತಿ ಮನ್ನಾ ಮಾಡಿದ್ದಾರೆ.

    ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಉಳಿಸಿಕೊಳ್ಳಲಾಗಿದ್ದ 10 ಲಕ್ಷ ರು., 4,20,000 ರು. ಮತ್ತು 5 ಲಕ್ಷ ರು.ಗಳ ಚೆಕ್‌ಅನ್ನು ಚೆನ್ನೈ ಕಾರ್ಪೋರೇಷನ್ನಿನ ವಕೀಲರಿಗೆ ಜಯಪ್ರದಾ ವಕೀಲರು ನೀಡಿದರು. ಇದರ ಜೊತೆಗೆ, ವುಡ್‌ಲ್ಯಾಂಡ್ಸ್ ಥಿಯೇಟರ್ಸ್ ಬಳಿ ಜಯಪ್ರತಾ ತೆಗೆದುಕೊಂಡಿದ್ದ 2,84,634 ರು.ಗಳಿಗೆ ಪ್ರತಿಯಾಗಿ ಅವರಿಗೆ ನೀಡಬೇಕಾಗಿದ್ದ 6.5 ಲಕ್ಷ ರು.ಗಳನ್ನು ಅವರಿಗೆ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆಗೆ ನೀಡಬೇಕಾಗಿದ್ದ ಎರಡು ಚಿಲ್ಲರೆ ಹಣವನ್ನೂ ಜಯಪ್ರದಾ ಪಾವತಿಸಿದರು.

    Saturday, April 20, 2024, 14:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X