Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಪರಾಗುವ ಅಪಾಯದಿಂದ ಪಾರಾದ ಜಯಪ್ರದಾ
ಚೆನ್ನೈ, ಮಾ.08 : ಮೋಹಕ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಪ್ರದಾ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಚೆನ್ನೈ ಮಹಾನಗರ ಪಾಲಿಕೆ ಮತ್ತು ಖಾಸಗಿ ಬಂಡವಾಳದಾರರಿಗೆ ನೀಡಬೇಕಾದ 25,20,000 ರು.ಗಳನ್ನು ಒಂದೇ ಕಂತಿನಲ್ಲಿ ನೀಡಿ ದಿವಾಳಿತನದಿಂದ ಪಾರಾಗಿದ್ದಾರೆ.
ಜಯಪ್ರದಾ ಥಿಯೇಟರ್ ಮತ್ತು ರಾಜ್ ಥಿಯೇಟರ್ ಪಾಲುದಾರರಾಗಿರುವ ಜಯಪ್ರದಾ ತಮ್ಮ ವಕೀಲರ ಮುಖಾಂತರ ಎಲ್ಲ ಹಣವನ್ನು ಪಾವತಿಸಿದ್ದರಿಂದ ಮದ್ರಾಸ್ ಹೈಕೋರ್ಟ್ ಜಯಪ್ರದಾ ದಿವಾಳಿಯಾಗಿದ್ದಾರೆಂದು ಈ ಮೊದಲು ಹೊರಡಿಸಿದ ಆದೇಶವನ್ನು ಹೊಡೆದುಹಾಕಿದ್ದಾರೆ. ಸೆಪ್ಟೆಂಬರ್ 2006ರಲ್ಲಿ ಹೊರಡಿಸಿದ್ದ ಆದೇಶವನ್ನು ತಳ್ಳಿಹಾಕಲು ಜಯಪ್ರದಾ ಸಲ್ಲಿಸಿದ್ದ ಅರ್ಜಿ 503 ದಿನಗಳ ವಿಳಂಬಕಾಲವನ್ನೂ ಹೈಕೋರ್ಟ್ ನ್ಯಾಯಮೂರ್ತಿ ಮನ್ನಾ ಮಾಡಿದ್ದಾರೆ.
ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಉಳಿಸಿಕೊಳ್ಳಲಾಗಿದ್ದ 10 ಲಕ್ಷ ರು., 4,20,000 ರು. ಮತ್ತು 5 ಲಕ್ಷ ರು.ಗಳ ಚೆಕ್ಅನ್ನು ಚೆನ್ನೈ ಕಾರ್ಪೋರೇಷನ್ನಿನ ವಕೀಲರಿಗೆ ಜಯಪ್ರದಾ ವಕೀಲರು ನೀಡಿದರು. ಇದರ ಜೊತೆಗೆ, ವುಡ್ಲ್ಯಾಂಡ್ಸ್ ಥಿಯೇಟರ್ಸ್ ಬಳಿ ಜಯಪ್ರತಾ ತೆಗೆದುಕೊಂಡಿದ್ದ 2,84,634 ರು.ಗಳಿಗೆ ಪ್ರತಿಯಾಗಿ ಅವರಿಗೆ ನೀಡಬೇಕಾಗಿದ್ದ 6.5 ಲಕ್ಷ ರು.ಗಳನ್ನು ಅವರಿಗೆ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆಗೆ ನೀಡಬೇಕಾಗಿದ್ದ ಎರಡು ಚಿಲ್ಲರೆ ಹಣವನ್ನೂ ಜಯಪ್ರದಾ ಪಾವತಿಸಿದರು.