twitter
    For Quick Alerts
    ALLOW NOTIFICATIONS  
    For Daily Alerts

    ನಂದ ಚಿತ್ರದಲ್ಲಿ ಶಿವರಾಜ್ ಕುಮಾರ್, ಸಂಧ್ಯಾ ನರ್ತನ

    By Staff
    |

    ಕೆ.ಕೆ.ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನಂದ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಗೆಳೆಯರಿಬ್ಬರ ಜೀವನದಲ್ಲಿ ಜರುಗಿರುವ ಘಟನೆಯೊಂದರ ಕಥಾಹಂದರವುಳ್ಳ ಈ ಚಿತ್ರಕ್ಕೆ ನಿರ್ಮಾಪಕ ಮಾಹಿನ್ ಅವರೇ ಕಥೆ ಬರೆದಿದ್ದಾರೆ. ಮಾತಿನಭಾಗದ ಚಿತ್ರೀಕರಣ ಮುಗಿಸುತ್ತಾ ಬಂದಿರುವ ನಂದನಿಗೆ ಈಗ ಹಾಡಿನ ಚಿತ್ರೀಕರಣದ ಸಮಯ.

    ಚಿತ್ರದ ಸಂಗೀತ ನಿರ್ದೇಶಕರಾಗಿರುವ ವಿ.ಮನೋಹರ್ ರಚಿಸಿರುವ ' ಚಿಂಗಾರಿ ಚಿಂಗಾರಿ ಚಿನಕುರಳಿ ಚಿಂಗಾರಿ ....ಕಣ್ಣಲೇ ಕೊಲ್ಲುವ ಕಠಾರಿ' ಎಂಬ ಗೀತೆಯನ್ನು ನಗರದ ಬಿ ಜಿ ಎಸ್ ಕಾಲೇಜಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇಮ್ರಾನ್ ನೃತ್ಯ ಸಂಯೋಜಿಸಿದ್ದ ಈ ಹಾಡಿನ ಚಿತ್ರೀಕರಣದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್ ಹಾಗೂ ಸಹ ನೃತ್ಯಗಾರರು ಭಾಗವಹಿಸಿದ್ದರು.

    ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದಿರುವ ಚಿತ್ರಕ್ಕೆ ನಿರ್ದೇಶಕ ಅನಂತರಾಜು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಎಸ್.ಮನೋಹರ್ ಸಂಕಲನ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ರಾಮು, ಗಂಡಸಿ ನಾಗರಾಜ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್, ಮಿಥನ್‌ತೇಜಸ್ವಿ, ಮಾಹಿನ್, ಜ್ಯೋತಿ, ಶ್ರೀನಾಥ್ ಮುಂತಾದವರಿದ್ದಾರೆ.

    (ದಟ್ಸ್ ಕನ್ನಡಸಿನಿವಾರ್ತೆ)

    ಶಿವರಾಜ್‌‌‌‌‌‌‌‌‌ಗೇಕೆ ಪರಭಾಷಾ ನಾಯಕಿಯರ ಮೋಹ

    Thursday, April 18, 2024, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X