ವಿಷ್ಣುವರ್ಧನ್ ಚಿತ್ರದಲ್ಲೊಂದು 'ಚತುರತೆ' ತುಣುಕು

By * ಶ್ರೀರಾಮ್ ಭಟ್
<ul id="pagination-digg"><li class="previous"><a href="/news/08-vishnuvardhana-movie-sudeep-bhavana-aid0172.html">« Previous</a>

Sudeep Bhavana
ಸಿನಿಮಾದಲ್ಲಿ ಎಲ್ಲಾ ಕಡೆಯಲ್ಲಿ ನಾಯಕ 'ಹೊಡಿ-ಬಡಿ' ಗಿಂತ ಹೆಚ್ಚಾಗಿ 'ಚತುರತೆ' ಯನ್ನೇ ನೆಚ್ಚಿಕೊಂಡಿದ್ದಾನೆ. ಆದರೂ ಈ ಅಗ್ನಿ ಪರೀಕ್ಷೆಯಲ್ಲಿ ಆತ ನಿಜವನ್ನು ಹೇಳಲು ಬಯಸುತ್ತಾನೆ. ಆದರೆ ಆ ಪರಿಸ್ಥಿತಿಯಲ್ಲಿ ನಿಜ ಹೇಳುವುದಕ್ಕಿಂತ ತಾಯಿ-ಮಗು ಇಬ್ಬರನ್ನೂ ಬದುಕಿಸುವುದೇ ಹೆಚ್ಚು ಸೂಕ್ತವಾಗಿರುತ್ತದೆ. ಆಗ ನಾಯಕ ಮೊದಲು ಅದರ ಬಗ್ಗೆ ಜಾಗ್ರತನಾಗುತ್ತಾನೆ.

ಅನಿವಾರ್ಯತೆಯಲ್ಲಿ ನಾಯಕ ಎಲ್ಲರಂತೆ ದೇವರನ್ನು ನೆನಪಿಸಿಕೊಂಡು ಅಲ್ಲೇ ಪಕ್ಕದಲ್ಲಿದ್ದ ಪ್ರತಿಮೆಯ ಬಳಿ ಹೋಗಿ ಕೈ ಮುಗಿದು ನಿಲ್ಲುತ್ತಾನೆ. ಅಲ್ಲೂ ಕೂಡ ತಕ್ಷಣ ಆತನ ಬುದ್ಧಿವಂತಿಕೆಯೇ ಕೆಲಸ ಮಾಡುತ್ತದೆ. ದೇವರ ಪ್ರತಿಮೆಯ ಪಕ್ಕದಲ್ಲಿ ಹಚ್ಚಿಟ್ಟಿದ್ದ ಸಾಂಬ್ರಾಣಿ ಕಣ್ಣಿಗೆ ಬೀಳುತ್ತದೆ. ಜೊತೆಗೆ ಆಗ ಡ್ಯೂಟಿಯಲ್ಲಿದ್ದ ಡಾಕ್ಟರ್ ಹೇಳಿದ "ಮಗು ತಾನಾಗೇ ಕಾಲನ್ನು ಒಳಕ್ಕೆ ಎಳೆದುಕೊಂಡರೆ ಇಬ್ಬರ ಪ್ರಾಣವೂ ಉಳಿಯುತ್ತದೆ" ಎಂಬ ಮಾತು ನೆನಪಿಗೆ ಬರುತ್ತದೆ.

ತಕ್ಷಣ ಉರಿಯುತ್ತಿದ್ದ ಸಾಂಬ್ರಾಣಿಯನ್ನು ಗರ್ಭಿಣಿಯ ಹೊಟ್ಟೆಯ ಬಳಿ ಹಿಡಿಯುತ್ತಾನೆ. ಆ ಶಾಖಕ್ಕೆ ಮಗು ತನ್ನ ಕಾಲನ್ನು ತಾನಾಗೇ ಒಳಕ್ಕೆ ತೆಗೆದುಕೊಳ್ಳುತ್ತದೆ. ಈ ರೀತಿ ನಂಬಿಕೆ ಹಾಗೂ ಮೂಢನಂಬಿಕೆಯ ಮಧ್ಯೆ ಇರುವ ಸೂಕ್ಷವನ್ನು ವೈಜ್ಞಾನಿಕ ಹಾಗೂ ಸಮಯಪ್ರಜ್ಞೆಯ ಜೊತೆ ಸೇರಿಸಿ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಹಾಗೂ ನಂತರ ಸಮಾಧಾನದ ನಿಟ್ಟುಸಿರು ಬಿಡುವಂತೆ ನಿರೂಪಿಸಲಾಗಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/08-vishnuvardhana-movie-sudeep-bhavana-aid0172.html">« Previous</a>

More from Filmibeat

English summary
Dwarakish produced, Sudeep movie 'Vishnuvardhana' released all over Karanataka in 120 centers. This is one master piece of the movie. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X