Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ತಾಯಾಣೇಗು ಅತಿ ಶೀಘ್ರದಲ್ಲೆ ಯೋಗರಾಜ್!
ಯಶಸ್ವಿ ನಿರ್ದೇಶಕ ಕಮ್ ಗೀತ ಸಾಹಿತಿ ಯೋಗರಾಜ್ ಭಟ್ರ ಹೆಸರಿಟ್ಟುಕೊಂಡು ಸಿನಿಮಾ ಮಾಡೋದು ಅಂದ್ರೆ ತಮಾಷೆ ಮಾತಲ್ಲ. ಇದನ್ನು ಸೀರಿಯಸ್ಸಾಗೇ ಮಾಡಿದ್ದಾರೆ ಮತ್ತೊಬ್ಬ ನಿರ್ದೇಶಕ ಪದ್ಮನಾಭನ್. ಸಾಕಷ್ಟು 'ಸರ್ಕಸ್' ಆಡಿ 'ಶ್ರೀಹರಿಕಥೆ' ಮಾಡಿದರೂ ಪದ್ಮನಾಭನ್ ಪ್ರಯತ್ನಗಳು ಫಲಿಸಿರಲಿಲ್ಲ.
ಈಗ ಅವರು 'ಯೋಗರಾಜ್ But' ಎಂದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರ ಪ್ರಯತ್ನ ಫಲ ಕೊಡುವ ನಿರೀಕ್ಷೆಯಲ್ಲಿದೆ. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಚಿತ್ರವಂತೆ. ನವೀನ್ ಕೃಷ್ಣ ಹಾಗೂ ನೀತೂ ಚಿತ್ರದ ಮುಖ್ಯ ಪಾತ್ರಧಾರಿಗಳು.
ನವೀನ್ ಕೃಷ್ಣ ಅವರ ತಂದೆ ಹಾಗೂ ಖ್ಯಾತ ಪೋಷಕ ನಟ ಶ್ರೀನಿವಾಸಮೂರ್ತಿ ಅವರು ಓರ್ವ ಅವಧೂತನಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ರಾಕೇಶ್ ಛಾಯಾಗ್ರಹಣ, ಮಿಲಿಂದ್ ಧರ್ಮಸೇನ ಸಂಗೀತವಿರುವ ಚಿತ್ರದಲ್ಲಿ ಅಜಿತ್, ಪವನ್ ಕುಮಾರ್, ಎ.ಆರ್. ಬಾಬು, ತರುಣ್ ಸುಧೀರ್, ಸಿಹಿಕಹಿ ಚಂದ್ರು, ಪ್ರತಾಪ್ ಅಭಿನಯಿಸಿದ್ದಾರೆ.
ಈ ಚಿತ್ರದ ಚಿತ್ರೀಕರಣದಿಂದಲೂ ಒಳ್ಳೆಯ ಮಾತುಗಳು ಕೇಳಿಬಂದಿವೆ. ಅವು ಎಷ್ಟರ ಮಟ್ಟಿಗೆ ನಿಜವಾಗಲಿವೆ ಎಂಬುದನ್ನು ಕಾದುನೋಡಬೇಕು. ಅಂದಹಾಗೆ ಚಿತ್ರ ಬಿಡುಗಡೆ ಯಾವಾಗ ಎಂದಿರಾ! ಚಿತ್ರತಂಡವೇ ಹೇಳುವಂತೆ ನಮ್ಮ ತಾಯಾಣೇಗು ಶೀಘ್ರದಲ್ಲೇ ರಿಲೀಸ್! (ದಟ್ಸ್ಕನ್ನಡ ಸಿನಿವಾರ್ತೆ)