ಸುದೀಪ್ ಗೈರುಹಾಜರಿಯಲ್ಲಿ ವಿಷ್ಣುವರ್ಧನ ರಿಲೀಸ್
ತಮ್ಮ ಚಿತ್ರದ ಬಿಡುಗಡೆ ಹಾದಿ ಸುಗಮವಾಗುವಂತೆ ಮೊದಲೇ ಹೈಕೋರ್ಟ್ನಿಂದ ಕೇವಿಯಟ್ ತಂದಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಭಾರತಿ ವಿಷ್ಣುವರ್ಧನ್ ಜಾಗೃತರಾಗಿದ್ದಾರೆ. ದ್ವಾರಕೀಶ್ ಅವರ ನಡೆಯ ಬಗ್ಗೆ ಅವರಿಗೆ ತೀವ್ರ ಬೇಸರವಾಗಿದೆ. ಹಾಗಾಗಿ ಅವರು ವಿಷ್ಣುವರ್ಧನ ಚಿತ್ರ ಪ್ರದರ್ಶನಕ್ಕೆ ಹೋಗಿಲ್ಲ ಎನ್ನುತ್ತವೆ ಮೂಲಗಳು.
ವಿಷ್ಣುವರ್ಧನ ಚಿತ್ರ ಗುರುವಾರ (ಡಿ.8) ರಾಜ್ಯದಾದ್ಯಂತೆ ತೆರೆಕಾಣುತ್ತಿದೆ. ಆದರೆ ಚಿತ್ರದ ಪ್ರಮುಖ ಆಕರ್ಷಣೆ ನಟ ಸುದೀಪ್ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಷ್ಟೇ ಅಲ್ಲ ಕರ್ನಾಟಕದಲ್ಲೇ ಇಲ್ಲ. ಅವರು ಎಲ್ಲಿಗೆ ಹೋಗಿದ್ದಾರಪ್ಪಾ ಎಂದು ಹುಡುಕ ಹೊರಟರೆ ದೂರದ ಆಂಧ್ರದ ರಾಜಧಾನಿ ಹೈದರಾಬಾದ್ ಕಾಣುತ್ತದೆ.
ಈಗ ಸುದೀಪ್ ತೆಲುಗಿನ 'ಈಗ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರದ ಶೂಟಿಂಗ್ಗಾಗಿ ಅವರು ಹೈದರಾಬಾದ್ಗೆ ಹೊರಟಿದ್ದಾರೆ. ಆದರೆ ಹೈದರಾಬಾದ್ನಲ್ಲಿದ್ದುಕೊಂಡೇ ತಮ್ಮ ವಿಷ್ಣುವರ್ಧನ ಚಿತ್ರದ ರೆಸ್ಪಾನ್ಸ್ ಹೇಗಿದೆ ಎಂದು ತಿಳಿದುಕೊಳ್ಳಲಿದ್ದಾರಂತೆ. ಚಿತ್ರದ ಟ್ರೈಲರ್ಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











