ಕನ್ನಡ ರಂಗ ಕಲಾವಿದ ಗುಡಿಗೇರಿ ಬಸವರಾಜ್ ವಿಧಿವಶ

ಸೂಳೆಯ ಮಗ, ರೈತನ ಮಕ್ಕಳು, ದುಡ್ಡಿನ ದರ್ಪ ಸೇರಿದಂತೆ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ಬಸವರಾಜು ರಚಿಸಿದ್ದರು. ಸಾಕಷ್ಟು ಸಂಕಷ್ಟಗಳ ನಡುವೆಯೂ ಸಂಗಮೇಶ್ವರ ನಾಟ್ಯ ಸಂಘವನ್ನು ಅವರು ಮುನ್ನಡೆಸಿಕೊಂಡು ಬಂದಿದ್ದರು. ವೃತ್ತಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಉತ್ತರ ಕರ್ನಾಟಕ ವೃತ್ತಿ ರಂಗಭೂಮಿಯ ಹುಲಿ ಎಂದೇ ಜನಜನಿತರಾಗಿದ್ದರು.
ಸುದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕ್ಯಾನ್ಸರ್ ಮತ್ತು ಮಧುಮೇಹ ಜರ್ಝರಿತಗೊಳಿಸಿತ್ತು. ಎರಡು ಕಾಲುಗಳು ಹಾಗೂ ಕಿಡ್ನಿ ಕೂಡ ಮಧುಮೇಹಕ್ಕೆ ಬಲಿಯಾಗಿದ್ದವು. ಅವರ ನಿಧನದಿಂದ ರಂಗಭೂಮಿ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಸಂಗ್ಯಾ ಬಾಳ್ಯ , ರೈತನ ಮಕ್ಕಳು ಹಾಗೂ ಸಿಂಧೂರ ಲಕ್ಷ್ಮಣ ಚಿತ್ರಗಳಲ್ಲೂ ಗುಡಿಗೇರಿ ಬಸವರಾಜ್ ಅಭಿನಯಿಸಿದ್ದರು. ಗುಡಿಗೇರಿ ಅವರ ನಿಧನಕ್ಕೆ ಕಲಾವಿದರು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಹುಟ್ಟೂರು ಗುಡಿಗೇರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
More from Filmibeat
English summary
Kannada theater artist Gudigeri Basavaraj (74) passed away on 8th Feb in Bangalore private hospital. The condition of Gudigeri became serious a few days ago. He suffering from cancer and diabetes. He acted in several Kannada films including Sangya Balya, Veera Sindhoora Lakshmana etc,.
ಗುಡಿಗೇರಿ ಬಸವರಾಜ್ ಕಲ್ಪನಾ ನಿಧನ ವಾರ್ತೆ ರಂಗಭೂಮಿ ಉತ್ತರ ಕರ್ನಾಟಕ ಕ್ಯಾನ್ಸರ್ ಮಧುಮೇಹ gudigere nagaraj obituary kalpana theater cancer diabites uttara karnataka


Click it and Unblock the Notifications











