ಕಠಾರಿವೀರ, ಗಾಡ್ ಫಾದರ್ ಮಧ್ಯೆ ಮಹಾ ಸಮರ

ಆದರೆ ಉಪೇಂದ್ರ ಚಿತ್ರಗಳ ಈ ನಿರ್ಮಾಪಕರಿಬ್ಬರ ಮಧ್ಯೆ ಈ ಮೊದಲು ಆ ಕುರಿತು ಯಾವುದೇ ಸಂಧಾನ, ಮಾತುಕತೆ ನಡೆದಿತ್ತೇ? ಬಿಡುಗಡೆ ದಿನಾಂಕದ ಬಗ್ಗೆ ಇದ್ದಕ್ಕಿದ್ದಂತೆ ಗೊಂದಲ ಮೂಡಿತೇ? ಅಥವಾ ಮುನಿರತ್ನ ಬಿಡುಗಡೆ ಘೋಷಿಸಿದ ಮೇಲೆ ಕೆ ಮಂಜು ಅದೇ ದಿನ ಚಿತ್ರ ತೆರೆಗೆ ತರುವ ಯೋಚನೆ ಮಾಡಿದರೆ? ಈ ಎಲ್ಲಾ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ದೊರೆಯಬೇಕಾಗಿದೆ.
ಏಪ್ರಿಲ್ 26, 2012 ಕ್ಕೆ ಬಿಡುಗಡೆ ಆಗಲಿದೆ ಬಹುನಿರೀಕ್ಷಿತ ಚಿತ್ರ ತೆಲುಗಿನ ಈಗ. ಈಗಾಗಲೇ ಬಿಡುಗಡೆಯಾಗಿರುವ ತೆಲುಗು ಚಿತ್ರ ರಚ್ಚ, ಬರಲಿರುವ ದಮ್ಮು ಕೂಡ ಕನ್ನಡ ಚಿತ್ರಗಳಿಗೆ ತೀವ್ರ ಪೈಪೋಟಿ ನೀಡಲಿರುವುದು ಗ್ಯಾರಂಟಿ. ಈ ವೇಳೆಯಲ್ಲಿ ಕನ್ನಡದ ನಿರ್ಮಾಪಕರಿಬ್ಬರು ಕಿತ್ತಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಇಬ್ಬರಿಗೂ ಹಿತ ಎಂಬುದು ಸಿನಿಪ್ರೇಮಿಗಳ ಅಭಿಪ್ರಾಯ. (ಒನ್ ಇಂಡಿಯಾ ಕನ್ನಡ)
More from Filmibeat
English summary
Upendra Movie producers K Manju and Munirathna are in Release Controversy. God Father producer K Manju filed complaint against Katariveera Surasundarangi producer Munirthna in Film Chamber.


Click it and Unblock the Notifications











