Don't Miss!
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್...ಹಂಸಲೇಖಾ ಎಂ.ಎ. ಓದುತ್ತಿದ್ದಾರೆ !
ಹಂಸಲೇಖ
ಸಾಹಿತ್ಯ
ಇನ್ನು
ಮುಂದೆ
ಕಂಗ್ಲೀಷನ್ನು
ಮೀರಿ
ಬೆಳೆಯುವುದೆ?
ಇಂಥಾ
ಒಂದು
ಆಶಯವನ್ನು
ಸದ್ಯಕ್ಕೆ
ಇಟ್ಟುಕೊಳ್ಳಬಹುದು.
ಯಾಕೆಂದರೆ,
ಹಂಸಲೇಖ
ಈಗ
ಸಾಹಿತ್ಯದ
ವಿದ್ಯಾರ್ಥಿ.
ತಲೆತುಂಬಾ
ಹರಿದಾಡುತ್ತಿರುವುದು
ಕೇಶೀರಾಜನ
ಶಬ್ದಮಣಿದರ್ಪಣ.
ಕರ್ನಾಟಕ
ಮುಕ್ತ
ವಿಶ್ವವಿದ್ಯಾಲಯದ
ಪ್ರಥಮ
ಎಂ.ಎ.ಯನ್ನು
ಹಂಸ್
ಸೀರಿಯಸ್ಸಾಗಿ
ತೆಗೆದುಕೊಂಡಿದ್ದಾರೆ.
ಮಾರ್ಚ್
31ರಿಂದ
ಏಪ್ರಿಲ್
5ರವರೆಗೆ
ಬೆಂಗಳೂರಿನ
ಸರ್ಕಾರಿ
ಕಲಾ
ಕಾಲೇಜಿನಲ್ಲಿ
ನಡೆದ
ಸಂಪರ್ಕ
ಕಾರ್ಯಕ್ರಮದ
ಅಷ್ಟೂ
ದಿನ
ಹಂಸ್
ಪೇಪರ್-
ಪೆನ್ನು
ಹಿಡಿದು
ಪಾಠ
ಕೇಳಿದ್ದೇ
ಇದಕ್ಕೆ
ಸಾಕ್ಷಿ.
ಹಂಸಲೇಖ ಕೇಳಿದ ಪಾಠವನ್ನು ಶ್ರದ್ಧೆಯಿಂದ ನೋಟ್ಸ್ ಮಾಡಿಕೊಳ್ಳುತ್ತಿದ್ದರು. ಅವರ ಮೊಬೈಲ್ ಫೋನೂ ಮೌನವಾಗಿತ್ತು. ಕಾರಣ- ಹಂಸ್ ಅದನ್ನು ಆಫ್ ಮಾಡಿದ್ದರು. ಪಾಠದ ನಡುವೆ ಯಾವ ಕಿರಿಕಿರಿಯೂ ಬೇಡ ಎಂಬಷ್ಟು ತನ್ಮಯತೆ ಅವರಲ್ಲಿ. ಪೇಪರಿನವರು ಫೋಟೋ ತೆಗೆಯಲು ಬಂದಾಗ, ದಯವಿಟ್ಟು ನನ್ನನ್ನು ಹೀರೋ ಮಾಡಬೇಡಿ ಅಂತ ನಮ್ರವಾಗಿ ಕೇಳಿ, ಬರೆದಿಟ್ಟುಕೊಂಡಿದ್ದ ನೋಟ್ಸ್ ಮೇಲೆ ಕಣ್ಣು ನೆಟ್ಟರು.
ಸಂಪರ್ಕ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಹಂಸ್ ಜೊತೆ ಪಾಠ ಕೇಳಿದ ಹೊಸ ಅನುಭವ. ಅದನ್ನು ಹಸಿರಾಗಿಟ್ಟುಕೊಳ್ಳಲೊಂದು ಆಟೋಗ್ರಾಫ್. ಹಂಸ್ ಜೊತೆ ನಿಂತು ತೆಗೆಸಿಕೊಂಡ ಫೋಟೋ ಕೂಡ ಕೆಲವರ ಬಳಿ ಉಂಟು.
ಪರೀಕ್ಷೆಗೆ ಇನ್ನು ತಿಂಗಳು ಮಾತ್ರ ಉಳಿದಿದೆ. ಹಂಸ್ ಗಂಭೀರವಾದ ಅಧ್ಯಯನದಲ್ಲಿ ತೊಡಗಿದ್ದಾರೆ ಎಂಬುದು ಸ್ಯಾಂಡಲ್ವುಡ್ನ ಮಾತು. ಮೊನ್ನೆ ವಿಂಡ್ಸರ್ ಮ್ಯಾನರ್ನಲ್ಲಿ ರಾಕ್ಲೈನ್ ನಿರ್ಮಿಸಿ ನಟಿಸಿರುವ ಡಕೋಟಾ ಎಕ್ಸ್ಪ್ರೆಸ್ ಚಿತ್ರದ ಕೆಸೆಟ್ ಬಿಡುಗಡೆ ಸಮಾರಂಭದಲ್ಲಿ ಶಬ್ದಮಣಿದರ್ಪಣ ಅನುರಣಿಸಿತು. ಕೆಸೆಟ್ಟಿನ ಕವರು ಪರಪರ ಸದ್ದು ಮಾಡಿದಾಗ, ಹಂಸ್ ಹೇಳಿದ್ದು ಶಬ್ದಮಣಿದರ್ಪಣ. ಹಾಗಂದು ಅವರು ನಕ್ಕರು. ಪಕ್ಕದಲ್ಲಿದ್ದವರಿಗೆ ನಗು ಯಾತಕ್ಕೆಂದು ಅರ್ಥವಾಗಲಿಲ್ಲ. ಕನ್ನಡ ಎಂ.ಎ. ವಿದ್ಯಾರ್ಥಿಗಳಿಗಂತೂ ಆಗುತ್ತದೆ.